Advertisement

ಹೊಸಬರ ರಾಬರಿ ಸ್ಟೋರಿ!

03:11 PM Feb 15, 2023 | Team Udayavani |

“ಸಮನ್ವಿ ಕ್ರಿಯೇಶನ್ಸ್‌’ ಬ್ಯಾನರಿನಲ್ಲಿ ಬೇಲೂರಿನ ಸಂತೋಷ್‌ ನಾಗೇನಹಳ್ಳಿ ನಿರ್ಮಿಸುತ್ತಿರುವ “1 ರಾಬರಿ ಕಥೆ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣವಾಗಿದೆ.

Advertisement

ಸದ್ಯ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್‌ ಪ್ರೂಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಂದಹಾಗೆ, “1 ರಾಬರಿ ಕಥೆ’ ರೊಮ್ಯಾಂಟಿಕ್‌, ಕಾಮಿಡಿ, ಆ್ಯಕ್ಷನ್‌, ಸಸ್ಪೆನ್ಸ್‌ -ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ಕಥೆಯನ್ನು ಸಿನಿಮಾದಲ್ಲಿ ಇಟ್ಟುಕೊಂಡು ಪಕ್ಕಾ ಮಾಸ್‌ ಕಮರ್ಷಿಯಲ್‌ ಆಗಿ ತೆರೆಗೆ ತರುತ್ತಿದ್ದೇವೆ ಎಂಬುದು ಚಿತ್ರತಂಡದ ಮಾತು.

“1 ರಾಬರಿ ಕಥೆ’ ಚಿತ್ರಕ್ಕೆ ಗೋಪಾಲ್‌ ಹಳ್ಳೇರ್‌ ಹೊನ್ನಾವರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ರಕ್ಕಂ’ ಖ್ಯಾತಿಯ ರಣಧೀರ್‌ ಗೌಡ “1 ರಾಬರಿ ಕಥೆ’ ಸಿನಿಮಾದಲ್ಲಿ ನಾಯಕನಾಗಿ, ಹೊಸ ಪ್ರತಿಭೆ ರಿಷ್ವಿ ಭಟ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜೊತೆಗೆ ಸುಂದರ ರಾಜ್‌, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್‌ ಕೆ. ಆರ್‌ ಪೇಟೆ, ತಬಲಾನಾಣಿ, ಜಹಾಂಗೀರ್‌, ಗಿರೀಶ್‌ ಶಿವಣ್ಣ, ಮೂಗು ಸುರೇಶ್‌, ಎಂ. ಕೆ ಮಠ, ನವೀನ್‌ ಪಡೀಲ್, ಸಂಜು ಬಸಯ್ಯ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‌

ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ, ಸಿಂಧನೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. “1 ರಾಬರಿ ಕಥೆ’ ಸಿನಿಮಾಕ್ಕೆ ಹರೀಶ್‌ ಜಿಂದೆ ಛಾಯಾಗ್ರಹಣ, ಸಂಜಿವರೆಡ್ಡಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜನೆಯಿದ್ದು, ಚಾಮರಾಜ್‌, ರೋಹಿತ್‌ ಅರುಣ್‌ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next