Advertisement

ಸುತ್ತೂರು ಮಠದಿಂದ ಮೃಗಾಲಯಕ್ಕೆ 1ಲಕ್ಷ ರೂ. ದೇಣಿಗೆ

11:32 AM Aug 25, 2018 | |

ಮೈಸೂರು: ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇಯ ಜಯಂತಿ ಮಹೋತ್ಸವದ ಅಂಗವಾಗಿ ಆ.29ರಂದು ಮೈಸೂರು ಮೃಗಾಲಯದ ಎಲ್ಲ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸಲು ಸುತ್ತೂರು ಮಠದ ವತಿಯಿಂದ ಒಂದು ಲಕ್ಷ ರೂ. ದೇಣಿಗೆ ನೀಡಲಾಗಿದೆ.

Advertisement

ಶುಕ್ರವಾರ ಒಂದು ಲಕ್ಷ ರೂ.ಗಳ ಚೆಕ್‌ ಅನ್ನು ಸುತ್ತೂರು ಮಠದ ಜಯರಾಜೇಂದ್ರ ಅವರು ಶ್ರೀಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರಿಗೆ ನೀಡಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ,ಕಾರ್ಯದರ್ಶಿ ಎಸ್‌.ಶಿವಕುಮಾರಸ್ವಾಮಿ, ಆರ್‌.ಎಸ್‌.ನಂಜುಂಡಸ್ವಾಮಿ, ಗಣೇಶ ಹಾಜರಿದ್ದರು.

ಸುತ್ತೂರು ಮಠದಿಂದ 9ನೇ ಬಾರಿಗೆ ಮೃಗಾಲಯದ ಪ್ರಾಣಿ-ಪಕ್ಷಿಗಳ ಒಂದು ದಿನದ ನಿರ್ವಹಣೆ ವೆಚ್ಚಕ್ಕಾಗಿ 1ಲಕ್ಷ ರೂ. ಚೆಕ್‌ ನೀಡಿರುವುದಕ್ಕೆ ಮೃಗಾಲಯದ ಆಡಳಿತ ವರ್ಗ ಕೃತಜ್ಞತೆ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next