Advertisement

ಮಾದಪ್ಪನ ಹುಂಡಿಯಲ್ಲಿ 1.5 ಕೋಟಿ ರೂ.

03:22 PM Sep 19, 2020 | Suhan S |

ಹನೂರು: ಪ್ರತಿ ತಿಂಗಳು ಸರಾಸರಿ ಒಂದು ಕೋಟಿ ರೂ.ಗೂ ಅಧಿಕ ನಗದು ಸಂಗ್ರಹವಾಗುತ್ತಿದ್ದ ಮಲೆ ಮಾದಪ್ಪನ ಹುಂಡಿಗೂ ಕೋವಿಡ್ ಬಿಸಿ ತಟ್ಟಿದ್ದು, ಕಳೆದ 84 ದಿನಗಳ ಅವಧಿಯಲ್ಲಿ 1.49 ಕೋಟಿ ರೂ. ನಗದು, 17 ಗ್ರಾಂ ಚಿನ್ನ ಮತ್ತು 985 ಗ್ರಾಂ ಬೆಳ್ಳಿ ಸಂಗ್ರಹವಾಗಿವೆ.

Advertisement

ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯವು ಜರುಗಿತು. ಹುಂಡಿ ಎಣಿಕೆಯಲ್ಲಿ 1,47,14,348 ರೂ. ನಗದು, 17 ಗ್ರಾಂ ಚಿನ್ನ ಮತ್ತು 985 ಗ್ರಾಂ ಬೆಳ್ಳಿ ಸಂಗ್ರಹವಾಗಿವೆ. ಬೆಳಗ್ಗೆ 8 ಗಂಟೆಯ ವೇಳೆಗೆ ಪ್ರಾರಂಭವಾದ ಹುಂಡಿ ಎಣಿಕೆ ಕಾರ್ಯವು ತಡರಾತ್ರಿ 7.30ರವರೆಗೂ ಬಿಗಿ ಪೊಲೀಸ್‌ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾಕಣ್ಗಾವಲಿನಲ್ಲಿ ಜರುಗಿತು.

ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪ ಕಾರ್ಯದರ್ಶಿ ಬಸವರಾಜು, ಅಭಿಯಂತರ ಮನ್ವಾಚಾರ್ಯ, ಪ್ರಾಧಿಕಾರದ ಸಿಬ್ಬಂದಿ, ಬ್ಯಾಂಕಿನ ಸಿಬ್ಬಂದಿ ಮತ್ತು ಮಲೆ ಮಹದೇಶ್ವರ ಬೆಟ್ಟ ಪೊಲೀಸ್‌ ಇಲಾಖಾ ಸಿಬ್ಬಂದಿ ಹಾಜರಿದ್ದರು.

ಕೋವಿಡ್ ದಿಂದ ಆದಾಯ ಕುಸಿತ: ಕೋವಿಡ್ ಲಾಕ್‌ ಡೌನ್‌ ಜಾರಿಗೊಳ್ಳುವ ಮುನ್ನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಪ್ರತಿ ತಿಂಗಳು ಸರಾಸರಿ ಒಂದರಿಂದ ಒಂದೂವರೆ ಕೋಟಿ ರೂ. ನಗದು ಸಂಗ್ರಹವಾಗುತಿತ್ತು. ಆದರೆ, ಕೊರೊನಾ ಮಹಾಮಾರಿಯಿಂದಾಗಿ ಮಾದಪ್ಪನ ಹುಂಡಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಕೋವಿಡ್ ಪ್ರಾರಂಭವಾದನಂತರ ಜಾತ್ರಾ ಮಹೋತ್ಸವಗಳು, ಅಮಾವಾಸ್ಯೆ ಪೂಜಾ ಕೈಂಕರ್ಯಗಳು ಮತ್ತು ಎಣ್ಣೆಮಜ್ಜನ ಸೇವೆಗಳಿಗೆ ಭಕ್ತಾದಿಗಳಿಗೆ ದರ್ಶನ ನೀಡಲಾಗುತ್ತಿಲ್ಲ. ಈ ಹಿನ್ನೆಲೆ ಭಕ್ತಾದಿಗಳ ಸಂಖ್ಯೆಯೂ ಕುಸಿದಿರುವ ಹಿನ್ನೆಲೆ ಹುಂಡಿಯ ಆದಾಯ ಕೂಡ ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next