Advertisement

ಜಮೀರ್‌ಗೆ ವಾಚ್‌ಮನ್‌ ಕೆಲಸಕ್ಕೂ ಸೇರಿಸಿಕೊಳ್ಳಲ್ಲ

11:21 PM May 13, 2019 | Lakshmi GovindaRaj |

ವಿಜಯಪುರ: ಮೇ 25ರೊಳಗೆ ಬಿಎಸ್‌ವೈ ಮುಖ್ಯಮಂತ್ರಿಯಾದರೆ ಅವರ ಮನೆಯಲ್ಲಿ ವಾಚ್‌ಮನ್‌ ಆಗುವೆ ಎಂದು ಸವಾಲು ಹಾಕಿರುವ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು ಮನೆ ಕಾಯಲು ಇರಿಸಿಕೊಳ್ಳಬೇಡಿ ಎಂದು ಸಲಹೆ ಕೊಡುತ್ತೇನೆಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಜಮೀರ್‌ ವಾಚ್‌ಮನ್‌ ಅದರೆ ಹೆಚ್ಚಿನ ಭದ್ರತೆ ಕೊಡಬೇಕಾಗುತ್ತದೆ. ಹೀಗಾಗಿ ಅವರ ಅಗತ್ಯ ಇಲ್ಲ ಎಂದರು. ಸಿದ್ದರಾಮಯ್ಯ ಮಾತ್ರ ಹಿಂದುಳಿದ ವರ್ಗಗಳಿಗೆ ಸೇರಿದ್ದು, ರಾಜ್ಯದಲ್ಲಿ ಯಾರೂ ದಲಿತ-ಹಿಂದುಳಿದ ನಾಯಕರೇ ಇಲ್ಲ.

ಸ್ವಾರ್ಥ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಸಿಎಂ ಹುಚ್ಚು ಹಿಡಿದಿದೆ. ಬೀರೇಶ್ವರ ದೇವರಿಗೂ ಕೂಡ ಅವರಿಗೆ ಒಳ್ಳೆ ಬುದ್ಧಿ ಕೊಡಲು ಸಾಧ್ಯವಾಗದಷ್ಟು ತಲೆ ಕೆಟ್ಟಿದೆ. ಸಿಎಂ ಹುಚ್ಚಿನ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next