Advertisement

ಜಮೀರ್‌ ಸಾಹೇಬರು ಭವಿಷ್ಯದ ಮುಸ್ಲಿಂ ನಾಯಕ : ಪರಂ 

10:39 AM Oct 05, 2017 | |

ಕೊರಟಗೆರೆ : ಕಾಂಗ್ರೆಸ್‌ ಸೇರ್ಪಡೆಯ ಸಿದ್ಧತೆಯಲ್ಲಿರುವ ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಹಾಡಿ ಹೊಗಳಿದ್ದು, ಕಾಂಗ್ರೆಸ್‌ನಲ್ಲಿ ಭವಿಷ್ಯದ ಮುಸ್ಲಿಂ ನಾಯಕ ಎಂದಿದ್ದಾರೆ. 

Advertisement

ಗುರುವಾರ ಕೊರಟಗೆರೆಯ ಅಕ್ಕಿರಾಂಪುರದಲ್ಲಿ ನಡೆದ ಉರುಸ್‌ ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ್‌ ‘ಜಮೀರ್‌ ಸಾಹೇಬರನ್ನು 10 ವರ್ಷಗಳ ಹಿಂದೆಯೇ ನಾನು ಕಾಂಗ್ರೆಸ್‌ಗೆ ಆಮಂತ್ರಿಸಿದ್ದೆ, ಜೆಡಿಎಸ್‌ನಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದೆ. ಅವರನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೇ ಒಪ್ಪಿದ್ದಾರೆ. ಡಿಸೆಂಬರ್‌ನಲ್ಲಿ ಜಮೀರ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ’ ಎಂದು ತಿಳಿಸಿದರು. 

‘ಮುಸ್ಲಿಮರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುವ ಏಕೈಕ ನಾಯಕ ಜಮೀರ್‌, ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ’ ಎಂದು ಪರಮೇಶ್ವರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next