Advertisement

ಅಫ್ರಿದಿ ಫೌಂಡೇಶನ್ ಗೆ ನೆರವಾಗಲು ಮನವಿ ಮಾಡಿದ ಯುವರಾಜ್, ಹರ್ಭಜನ್ ಸಿಂಗ್ !

09:18 PM Apr 01, 2020 | Team Udayavani |

ಹೊಸದಿಲ್ಲಿ: ಕೋವಿಡ್-19 ಸೋಂಕಿನ ವಿರುದ್ಧ ಹೋರಾಟಕ್ಕೆ ದೇಶದಲ್ಲಿ ಸಾಕಷ್ಟು ಕ್ರೀಡಾಪಟುಗಳು ಸಹಾಯ ಮಾಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಧನ ಸಹಾಯ ನೀಡುತ್ತಿದ್ದಾರೆ. ಆದರೆ ಭಾರತದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ.

Advertisement

ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರು ಪಾಕಿಸ್ಥಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಅವರ ಫೌಂಡೇಶನ್ ಗೆ ದೇಣಿಗೆ ನೀಡಲು ಜನರಲ್ಲಿ ಮನವಿ ಮಾಡಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಎಲ್ಲರಿಗೂ ಕಠಿಣ ಸಮಯವಿದು. ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಅದಕ್ಕಾಗಿ ನಾನು ಶಾಹೀದ್ ಅಫ್ರಿದಿ ಫೌಂಡೇಶನ್ ಬೆಂಬಲಿಸುತ್ತೇನೆ ಎಂದು ಯುವರಾಜ್ ಟ್ವೀಟ್ ಮಾಡಿದ್ದರು. ಟರ್ಬನೇಟರ್ ಹರ್ಭಜನ್ ಸಿಂಗ್ ಕೂಡಾ ಎಸ್ ಎ ಫೌಂಡೇಶನ್ ಗೆ ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದರು.

ಕೋವಿಡ್ 19 ಸೋಂಕು ವಿರುದ್ಧ ಹೋರಾಟಕ್ಕೆ ಭಾರತದಲ್ಲಿ ಇದುವರೆಗೆ ಯಾವುದೇ ಸಹಾಯ ಮಾಡದ ಸಿಂಗ್ ದ್ವಯರು ಪಾಕಿಸ್ಥಾನದ ಫೌಂಡೇಶನ್ ಗೆ ಸಹಾಯ ಮಾಡಿ ಎಂದಿರುವುದು ಭಾರತದ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next