Advertisement

ಬೆಂಗಳೂರು: ಹತ್ತಾರು ಗಣ್ಯರಿಗೆ  ವಂಚಿಸಿ ಕೋಟ್ಯಂತರ ರೂ. ಆಸ್ತಿ ಗಳಿಸಿರುವ ಯುವರಾಜ್‌ ಅಲಿಯಾಸ್‌ ಸ್ವಾಮಿ ಪ್ರಕರಣ ವನ್ನು ಸದ್ಯದಲ್ಲೇ ಸಿಐಡಿ ಅಥವಾ ಸಿಬಿಐಗೆ ವಹಿಸಲು ಹಿರಿಯ ಪೊಲೀಸ್‌ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

Advertisement

ಪ್ರಕರಣದ ಸಂಬಂಧ ಸಿಸಿಬಿ ಅಧಿಕಾರಿಗಳು ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಮಾಹಿತಿ ನೀಡಿದ್ದಾರೆ. ಇ.ಡಿ.ಯು ಇಸಿಐಆರ್‌ ದಾಖಲಿಸಿಕೊಂಡಿದೆ. ಆತ ದಿಲ್ಲಿ ಮತ್ತು ಇತರ ರಾಜ್ಯಗಳ ಪ್ರಭಾವಿಗಳ ಜತೆ ಸಂಪರ್ಕ ಹೊಂದಿದ್ದು, ಅಕ್ರಮಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ಆಸ್ತಿ ಮೌಲ್ಯ 450 ಕೋ.ರೂ.! :

ಆರೋಪಿಯ ಬ್ಯಾಂಕ್‌ ಲಾಕರ್‌ನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಆತ ವಿವಿಧ ಜಿಲ್ಲೆಗಳಲ್ಲಿ 450 ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾನೆ. ಈ ಬಗ್ಗೆ ಆರೋಪಿ ಮಾಹಿತಿ ನೀಡುತ್ತಿಲ್ಲ ಎಂದು ಸಿಸಿಬಿ ಮೂಲಗಳು ಹೇಳಿವೆ. ಕಳೆದ ತಿಂಗಳು ಆರೋಪಿಯ ನಾಗರಬಾವಿ ಮನೆ ಮೇಲೆ ದಾಳಿ ನಡೆಸಿದಾಗ ಆಸ್ತಿ ಪಾಸ್ತಿ ಕಂಡು ಪೊಲೀಸರೇ ದಂಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next