Advertisement

ಬಣ್ಣದ ಹೊಂಡ ತುಳುಕಿಸಿ ಯುಗಾದಿ ಹಬ್ಬದಾಚರಣೆ

07:46 PM Apr 15, 2021 | Team Udayavani |

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಮಾರುತಿ ದೇವಸ್ಥಾನದ ಜಾತ್ರೆ ಪ್ರಯುಕ್ತ ತುಂಬಿದ ಹೊಂಡ ತುಳುಕಿಸಿದ ಯುವಕರು, ಯುಗಾದಿ ಹಬವನ್ನು ಸಂಭ್ರಮದಿಂದ ಆಚಸಿದರು.

Advertisement

ಯುಗಾದಿ ಪಾಡ್ಯದ ಧಾರ್ಮಿಕ ವಿ ಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿದ ಬಳಿಕ ದೇವಸ್ಥಾನ ಅರ್ಚಕರು ಬಣ್ಣದ ಹೊಂಡ ತುಳುಕಿಸಲು ಚಾಲನೆ ನೀಡಿದರು. ನಂತರ ಯುವಕರು, ಹಿರಿಯರು ಹಾಗೂ ಕಿರಿಯರು ಎಂಬ ಭೇದವಿಲ್ಲದೇ ನಾ ಮುಂದು ತಾ ಮುಂದು ಎಂದು ಹೊಂಡದಲ್ಲಿ ಜಿಗಿದಾಡಿ ತುಳುಕಿಸಿ ಸಂಭ್ರಮಿಸಿದರು.

ಮುತ್ತೈದೆಯರು ಕುಂಬಾರರ ಮನೆಗೆ ತೆರಳಿ ಕುಂಭ ತಂದು ಪವಿತ್ರ ನೀರು ಸುರಿದು ಹೊಂಡ ತುಂಬಿಸಿದರು. ಪ್ರಾತಃಕಾಲ ಮಾರುತಿ ದೇವರ ಮೂರ್ತಿಗೆ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next