Advertisement

ಪಕ್ಷ ಸಂಘಟನೆಗೆ ಯುವ ಶಕ್ತಿ ಅವಶ್ಯ

10:29 AM Dec 05, 2021 | Team Udayavani |

ಭಾಲ್ಕಿ: ಪಕ್ಷದ ಸಂಘಟನೆಗೆ ಯುವ ಶಕ್ತಿಯ ಅವಶ್ಯಕತೆ ತುಂಬಾ ಇದೆ ಎಂದು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ಕರ್ನಾಟಕದ ತಾಲೂಕು ಯುವಘಟಕದ ಅಧ್ಯಕ್ಷ ರಾಜಕುಮಾರ ಡಾವರಗಾಂವೆ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ರಾಜಮಾತಾ ಜೀಜಾವು ವಾಚನಾಲಯದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ಕರ್ನಾಟಕ ಜಿಲ್ಲಾ ಯುವಘಟದ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಪಕ್ಷ ಬೆಳೆಯಬೇಕಾದರೆ ಅದಕ್ಕೆ ಯುವಕರ ಶ್ರಮ ಸಾಕಷ್ಟಿದೆ. ಅತಿಹೆಚ್ಚು ಯುವ ಶಕ್ತಿ ಹೊಂದಿರುವ ದೇಶದಲ್ಲಿ ಯುವಕರು ಮನಸ್ಸುಮಾಡಿದರೆ ಏನನ್ನೂಬೇಕಾದರೂ ಸಾಧಿಸಬಹುದು. ಹೀಗಾಗಿ ಎಲ್ಲ ಯುವಕರು ಸಮಾನ ಮನಸ್ಕರಾಗಿ ರಾಷ್ಟ್ರವಾದಿ ಪಕ್ಷ ರಾಷ್ಟ್ರದಲ್ಲಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.

ಎನ್‌ಸಿಪಿ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಭರತ ಕಾಂಬಳೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎನ್‌ ಸಿಪಿ ಜಿಲ್ಲಾ ಉಸ್ತುವಾರಿ ಅಜಿತ ಮೂಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯೋಹಾನ ಹಿರಿಗೆ, ಸುಧಾಕರ ಅತಿವಾಳೆ, ಓಂಪ್ರಕಾಶ ಕಾಂಬಳೆ, ಚರಣಜೀತ ಅಣದೂರೆ, ಸಾಗರ ಜಾಧವ, ಮೋಹನ ಜಾಧವ, ಸತೀಶ ಬೀದರ, ಸತೀಶಕುಮಾರ ಸೂರ್ಯವಂಶಿ, ಶಾಲಿವಾನ ಕರಕರೆ, ಪ್ರಕಾಶ ಪಿ.ಎನ್‌.ಜೆ, ಶೈಲಾನಿ ಶೇಖ್‌, ಶಾರೂಕ್‌ ಶೇಖ್‌, ಇಮಾನ್ವೆಲ್‌, ಸಾಯಮನ್‌ ಡಾವರಗಾಂವೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next