Advertisement

ಕಲಬುರಗಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಹಾಡಹಗಲೇ‌ ಯುವಕನ ಬರ್ಬರ ಹತ್ಯೆ

09:44 PM Aug 20, 2020 | Hari Prasad |

ಕಲಬುರಗಿ: ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮರೆದಿದ್ದಾರೆ.

Advertisement

ಗುರುವಾರ ಹಾಡಹಗಲೇ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ವೀರೇಶ ಶರಣಬಸಪ್ಪ ಕಡಗಂಚಿ (20) ಎಂಬಾತನೇ ಕೊಲೆಯಾದ ಯುವಕ. ನಗರದ ಹೃದಯ ಭಾಗವಾದ ಪಬ್ಲಿಕ್ ಗಾಡರ್ನ್ ನಲ್ಲಿ ಈ ಕೊಲೆ ಮಾಡಲಾಗಿದೆ.

ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಭೀಕರ ಕೊಲೆ ನಗರದ ಜನತೆಯನ್ನು ಭಯಭೀತರನ್ನಾಗಿಸಿದೆ.

ಗಾಡರ್ನ್ ಒಳ ರಸ್ತೆಯಲ್ಲಿ ರಕ್ತ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ವೀರೇಶನನ್ನು108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾ‌ನೆ.

Advertisement

ಇಲ್ಲಿನ ಆಳಂದ‌ ರಸ್ತೆಯ ರಾಣೋಸಫೀರ್ ದರ್ಗಾ ಪ್ರದೇಶದ ನಿವಾಸಿಯಾಗಿದ್ದ ಮೃತ ವೀರೇಶ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ಹಣದ ವಿಚಾರಗಾಗಿ ಖಾರದಪುಡಿ ಅಂಬು ಗ್ಯಾಂಗ್ ಈ ಕೊಲೆ ಮಾಡಿದೆ ಎಂದು ಹೇಳಲಾಗಿದೆ.


ಕೋಟನೂರ ಮಠದ ಸಮೀಪದ ನಿವಾಸಿಯಾದ ಅಂಬಾರಾಯ ಅಲಿಯಾಸ್ ಖಾರದಪುಡಿ ಅಂಬು, ಭವನ, ಲವ ನಂದಿಕೂರ, ಗಿರೀಶ, ಕಾಳು, ಬಸ್ಸು, ಅಭಿಲಾಷ್ ಎಂಬುವವರು ಸೇರಿಕೊಂಡು ವೀರೇಶನಿಗೆ‌ ಚಾಕುವಿಂದ ಇರಿದಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

ಕೊಲೆಯಾದ ವೀರೇಶನ ಬಳಿ ಖಾರದಪುಡಿ ಅಂಬು ಹಣ ಕೇಳಿದ್ದ ಮಾತ್ರವಲ್ಲದೇ, ಇದೇ ಕಾರಣಕ್ಕೆ ಬುಧವಾರ ವೀರೇಶನ ಮನೆಗೂ ಹೋಗಿದ್ದಮಾತ್ರವಲ್ಲದೇ ಇವರಿಬ್ಬರೂ ಫೋನ್ ನಲ್ಲೂ ಪರಸ್ಪರ ಬೈದಾಡಿಕೊಂಡಿದ್ದರು.

ಗುರುವಾರ ವೀರೇಶಗಾಗಿ ಹುಡುಕಾಟ ನಡೆಸಿದಾಗ ಆತ ‌ಗಾಡರ್ನ್ ನಲ್ಲಿ ಇರುವುದಾಗಿ ಗೊತ್ತಾಗಿತ್ತು. ಅಂತೆಯೇ ಎಲ್ಲರೂ ಅಲ್ಲಿಗೆ ಬಂದಾಗ ವಾಗ್ವಾದ ನಡೆದಿದೆ. ಇದೇ ವೇಳೆ ವೀರೇಶನ ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಲೇ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್, ಡಿಸಿಪಿ ಡಿ.ಕಿಶೋರ್ ಬಾಬು, ಎಸಿಪಿ ವಿಜಯಕುಮಾರ‌ ಮತ್ತು ಸಿಬ್ಬಂದಿ ಭೇಟಿ‌‌‌ ನೀಡಿ, ಪರಿಶೀಲನೆ ನಡೆಸಿದರು. ಈ ಕೊಲೆಗೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next