Advertisement

Mangaluru: ವಿದ್ಯುತ್ ತಂತಿ ತಗುಲಿ ಇಬ್ಬರು ರಿಕ್ಷಾ ಚಾಲಕರ ದುರಂತ ಅಂತ್ಯ

11:08 AM Jun 27, 2024 | Team Udayavani |

ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟಿರುವ ದಾರುಣ ಘಟನೆ ನಗರದ ರೊಸಾರಿಯೊ ಬಳಿ ಇಂದು (ಗುರುವಾರ) ಮುಂಜಾನೆ ನಡೆದಿದೆ.

Advertisement

ಮೃತರನ್ನು ಹಾಸನ ಮೂಲದ ರಾಜು ಮತ್ತು ರಾಮಕುಂಜದ ದೇವರಾಜ್ ಎನ್ನಲಾಗಿದೆ.

ಇವರು ರೊಸಾರಿಯೋ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ ಇಂದು ಬೆಳಿಗ್ಗೆ ರಿಕ್ಷಾ ತೊಳೆಯಲೆಂದು ಓರ್ವ ಚಾಲಕ ಮನೆಯಿಂದ ಹೊರಬಂದ ವೇಳೆ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಇದನ್ನು ಗಮನಿಸಿದ ಇನ್ನೋರ್ವ ಚಾಲಕ ರಕ್ಷಣೆಗೆ ಧಾವಿಸಿದ್ದು ಈ ವೇಳೆ ಅವರು ಕೂಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next