Advertisement

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

01:35 AM Jun 30, 2024 | Team Udayavani |

ಸುಳ್ಯ: ಎಳೆ ಅಡಿಕೆ ಉದುರುವ ಸಮಸ್ಯೆ ತೀವ್ರಗೊಂಡಿದ್ದು, ಇದು ಈ ಬಾರಿಯ ಫಸಲಿನ ಮೇಲೆ ತೀವ್ರ ಪರಿಣಾಮ ಬೀರಲಿದೆ.

Advertisement

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಮಳೆ ಆರಂಭಗೊಂಡ ಕೆಲವು ದಿನಗಳ ಬಳಿಕ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ಶೇ.50ರಷ್ಟು ಎಳೆ ಅಡಿಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಡಿಕೆ ಕೃಷಿಗೆ ಯಥೇತ್ಛ ನೀರು ಅಗತ್ಯ. ಈ ಬಾರಿಯ ಬೇಸಗೆಯಲ್ಲಿ ಬಿಸಿಲು ತೀವ್ರವಾಗಿದ್ದು, ಹೆಚ್ಚಿನ ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಇದು ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಬೇಸಗೆಯಲ್ಲಿ ಅಡಿಕೆ ಹಿಂಗಾರ ಕರಟುವ ಸಮಸ್ಯೆ ಕಾಣಿಸಿಕೊಂಡಿತ್ತು.

ಬೇಸಗೆಯಲ್ಲಿ ಬಾರೀ ಪ್ರಮಾಣದಲ್ಲಿ ತಾಪಮಾನ ಹೆಚ್ಚಳಗೊಂಡಿತ್ತು. ಜತೆಗೆ ಮೇ ಅಂತ್ಯದವರೆಗೂ ಸರಿಯಾಗಿ ಮಳೆಯಾ ಗಿರಲಿಲ್ಲ. ಬಳಿಕ ಮಳೆ ಆಗಿದ್ದು, ಆಗ ಎಳೆ ಅಡಿಕೆ ಉದುರಲು ಆರಂಭಗೊಂಡಿತ್ತು.

ಮಳೆ ಬಿದ್ದ ಬಳಿಕ ಅಲ್ಪ ಪ್ರಮಾಣದಲ್ಲಿ ಎಳೆ ಅಡಿಕೆ ಉದು ರುವುದು ಕಡಿಮೆಯಾಗಿತ್ತು. ಅನಂತರ ಮಳೆ ಹಾಗೂ ಬಿಸಿಲ ವಾತಾವರಣದಲ್ಲಿ ಉಷ್ಣತೆ ಏರಿಕೆ ಯಾಗಿ ಹಲವೆಡೆ ಎಳೆ ಅಡಿಕೆ ಉದುರುತ್ತಿರುವುದು ಕಂಡು ಬರುತ್ತಿದೆ. ಮಳೆ ಆರಂಭವಾದ ಕೆಲವು ದಿನಗಳಲ್ಲಿ ಮತ್ತೆ ಬಿಸಿಲಿನ ವಾತಾ ವರಣ ಇರುವು ದರಿಂದ ಶಿಲೀಂಧ್ರಗಳು ಎಳೆ ಅಡಿಕೆ ರಸವನ್ನು ಹೀರುವುದರಿಂದ ಅವು ಉದುರುತ್ತವೆ ಎನ್ನುತ್ತಾರೆ ಕೃಷಿಕರು.

Advertisement

ಈಗಾಗಲೇ ಅಡಿಕೆಗೆ ಔಷಧ ಸಿಂಪಡಣೆ ಆರಂಭಿಸಲಾಗಿದೆ. ಸಾಮಾನ್ಯ ವಾಗಿ ಮೊದಲ ಹಂತದಲ್ಲಿ ಅಡಿಕೆ ಫಸಲು ನಿಲ್ಲಲು ಔಷಧ ಸಿಂಪಡಿಸಲಾಗುತ್ತದೆ. ಕೆಲವರು ಪ್ರತಿ ತಿಂಗಳು ಅಥವಾ 2-3 ತಿಂಗಳಿಗೊಮ್ಮೆ ಔಷಧ ಸಿಂಪಡಿಸುತ್ತಾರೆ. ಎಳೆ ಅಡಿಕೆ ಉದುರುವುದನ್ನು ತಡೆ ಯಲೂ ಔಷಧ ಸಿಂಪಡಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಮಾತ್ರ ಸಮಸ್ಯೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ರೈತರು.

ಕೀಟ ರಸ ಹೀರುವುದರಿಂದ ಎಳೆ ಅಡಿಕೆ ಉದುರುತ್ತದೆ. ಮಳೆಗಾಲ ಸಂದರ್ಭದಲ್ಲಿ ಇದು ಅಲ್ಲಲ್ಲಿ ಕಂಡುಬರುತ್ತದೆ. ಔಷಧ ಸಿಂಪಡಣೆ ಮೂಲಕ ನಿಯಂತ್ರಣ ಸಾಧ್ಯವಿದೆ. ಸ್ಪಷ್ಟವಾಗಿ ಯಾವ ಕಾರಣದಿಂದ ಎಳೆ ಅಡಿಕೆ ಉದುರುತ್ತಿದೆ, ಅದಕ್ಕೆ ಯಾವ ಔಷಧ ಮೂಲಕ ನಿಯಂತ್ರಣ ಸಾಧ್ಯ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿ ಅಥವಾ ಉದುರಿದ ಎಳೆ ಅಡಿಕೆಯನ್ನು ಪರಿಶೀಲಿಸಿ ತಿಳಿಯಬಹುದು.
– ಡಾ| ನಾಗರಾಜ್‌ ವಿಜ್ಞಾನಿ, ಸಿ.ಪಿ.ಸಿ.ಐ. ವಿಟ್ಲ

Advertisement

Udayavani is now on Telegram. Click here to join our channel and stay updated with the latest news.

Next