Advertisement

Siddapura: ಪ್ರಗತಿಪರ ಕೃಷಿಕ ಸಬ್ಟಾಗಿಲು ಶೇಖರ ಶೆಟ್ಟಿ ಕಾಲು ಜಾರಿ ಬಾವಿಗೆ ಬಿದ್ದು ಸಾವು

09:41 PM Jun 25, 2024 | Team Udayavani |

ಸಿದ್ದಾಪುರ: ಪ್ರಗತಿಪರ ಕೃಷಿಕ ಹಾಲಾಡಿ ಗ್ರಾಮದ ಸಬ್ಟಾಗಿಲು ಶೇಖರ ಶೆಟ್ಟಿ (74) ಅವರು ಜೂ.25ರಂದು ಅಡಿಕೆ ತೋಟಕ್ಕೆ ಹೋದವರು, ಮನೆಯ ಹಿಂಬದಿಯಲ್ಲಿ ಹೊಸದಾಗಿ ನಿರ್ಮಿಸಿದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

Advertisement

ಕಳೆದ ಹಲವು ದಿನಗಳಿಂದ ನಿತಂತರವಾಗಿ ಪರಿಸರದಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಭೂಮಿಯ ಮಣ್ಣು ಮೆತ್ತಗಾಗಿದ್ದು, ಬಾವಿಯ ಬಳಿ ಸಾಗುವಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸ್ನೇಹ ಜೀವಿಯಾಗಿರುವ ಅವರು ಹಾಲಾಡಿ ಗ್ರಾಮದ ಎಲ್ಲಾ ಸಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಹಾಲಾಡಿ ನಾಗರಿಕ ಹಿತರಕ್ಷಣ ವೇದಿಕೆ ಮತ್ತು ಉಡುಪಿ ಜಿಲ್ಲಾ ರೈತ ಸಂಘದ ಸದಸ್ಯರಾಗಿದ್ದರು. ಹುಯ್ನಾರು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮತ್ತು ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ಜೀಣೋದ್ಧಾರದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಘಟನ ಸ್ಥಳಕ್ಕೆ ವಿಧಾನ ಪರಿಷತ್‌ನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಭೇಟಿ ನೀಡಿ ಉಪಸ್ಥಿತರಿದ್ದು, ನಡೆಯುವ ಪ್ರಕ್ರೀಯೆಯಲ್ಲಿ ಪಾಲ್ಗೊಂಡರು. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಭೇಟಿ ನೀಡಿ, ಸಂತಾಪ ಸೂಚಿಸಿದರು.

Advertisement

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next