Advertisement

ಧರ್ಮಸ್ಥಳಕ್ಕೆ ಯುವಕರ ಸೈಕಲ್‌ ಯಾತ್ರೆ

07:55 PM Mar 12, 2021 | Team Udayavani |

ಕೊಟ್ಟಿಗೆಹಾರ : ಬಳ್ಳಾರಿಯಿಂದ ಧರ್ಮಸ್ಥಳಕ್ಕೆ ಸೈಕಲ್‌ ಯಾತ್ರೆ ಹೊರಟ ಯುವಕರ ತಂಡ ಗುರುವಾರ ಕೊಟ್ಟಿಗೆಹಾರ ತಲುಪಿತು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಯುವಕರ ತಂಡದ ಅಂಜನಪ್ಪ, ಬಳ್ಳಾರಿಯ ಹರಪನಹಳ್ಳಿಯ 19 ಜನ ಯುವಕರು ಮಾ.9ಕ್ಕೆ ಸೈಕಲ್‌ ಯಾತ್ರೆ ಕೈಗೊಂಡಿದ್ದು ಧರ್ಮಸ್ಥಳಕ್ಕೆ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌ ಮಾರ್ಗವಾಗಿ ಮಾ.11 ಕ್ಕೆ ತಲುಪುತ್ತೇವೆ. ಕಳೆದ 16 ವರ್ಷ ದಿಂದ ಸೈಕಲ್‌ ಯಾತ್ರೆ ಮಾಡಿಕೊಂಡು ಬಂದಿದ್ದೇವೆ. ಮಾರ್ಗ ಮಧ್ಯೆ ರಾತ್ರಿ ಸಮಯದಲ್ಲಿ ಅಲ್ಲಲ್ಲಿ ಮಲಗಿ ವಿಶ್ರಾಂತಿ ಪಡೆದುಕೊಂಡು ಮತ್ತೆ ಸೈಕಲ್‌ ಯಾತ್ರೆ ಮುಂದುವರಿಸುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next