Advertisement

ರಸ್ತೆ ಹೊಂಡದಲ್ಲಿ ತರಕಾರಿ ಗಿಡ ನೆಟ್ಟು ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ

01:12 PM Jun 15, 2021 | Team Udayavani |

ಕಾರ್ಕಳ: ಯುವ ಕಾಂಗ್ರೇಸ್ ಮಂಗಳವಾರ ವಿನೂತನ ಪ್ರತಿಭಟನೆ  ನಡೆಸುವ ಮೂಲಕ ಗಮನ ಸೆಳೆಯಿತು. ಚಿನ್ನದ ರಸ್ತೆಯ ಆಸೆ ತೋರಿಸಿದವರು ಗುಂಡಿ ಭಾಗ್ಯವನ್ನು ಕರುಣಿಸುತ್ತಿದ್ದಾರೆ ಎಂದು ಆರೋಪಿಸಿ, ಮಂಗಳೂರು ರಸ್ತೆಯಲ್ಲಿರುವ ಟಿ.ಎ.ಪಿ.ಎಂ.ಸಿ ಮುಂಬಾಗದ ಹದಗೆಟ್ಟ ರಸ್ತೆಯ ಹೊಂಡದಲ್ಲಿ ತರಕಾರಿ ಬೆಂಡೆ ಗಿಡ ನೆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Advertisement

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಅಹಾರ ಕಿಟ್  ನೀಡುವ ಬದಲಿಗೆ ತರಕಾರಿ ಬೆಂಡೆ ಬೀಜವನ್ನು ನೀಡಿ ಶಾಸಕರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಇದನ್ನೂ ಓದಿ: ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿಯು ಟ್ರೇಡಿಂಗ್ ಸರಕಾರವಾಗಿದೆ: ಸೊರಕೆ

ಕಾಂಗ್ರೇಸ್ ಮುಖಂಡ ಪುರಸಭಾ ಸದಸ್ಯ ಶುಭದರಾವ್, ಯುವ ಕಾಂಗ್ರೇಸ್ ಅದ್ಯಕ್ಷ ಯೋಗಿಶ್ ಇನ್ನಾ, ಜಿಲ್ಲಾ ಯುವ ಕಾಂಗ್ರೇಸ್ ಪ್ರ. ಕಾರ್ಯದಶರ್ಿ ಕೃಷ್ಣ ಎ ಶೆಟ್ಟಿ ಬಜಗೋಳಿ, ಪ್ರದೀಪ್ ಶೆಟ್ಟಿ ನಲ್ಲೂರು, ರಾಜೇಂದ್ರ, ಶಾಮ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next