Advertisement

ಕೋವಿಡ್‌ ಔಷಧ ನಿಧಿಗಾಗಿ ಯುವಕರ ಬೈಕ್‌ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ

11:41 AM Dec 01, 2020 | Suhan S |

ಕುಂದಾಪುರ, ನ. 30: ಕೋವಿಡ್‌ ಔಷಧ ನಿಧಿಗಾಗಿ 3 ಕೋ.ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡು ಬೈಕ್‌ ಯಾತ್ರೆ ನಡೆಸುವ ಸಾಹಸಕ್ಕೆ ಇಲ್ಲಿನ 23 ಮಂದಿ ಯುವಕರ ತಂಡವೊಂದು ಮುಂದಾಗಿದೆ.

Advertisement

ಡಿ. 1ರಂದು ಬೈಕ್‌ ಯಾನ ಆರಂಭವಾಗಲಿದ್ದು, 18 ದಿನಗಳ ಪರ್ಯಂತ 4 ಸಾವಿರ ಕಿ.ಮೀ. ದೂರ ಕ್ರಮಿಸಿ 6 ರಾಜ್ಯ, 13 ನಗರ, 11 ರೋಟರಿ ಜಿಲ್ಲೆಗಳನ್ನು ಹಾದು ಹೋಗಲಿದ್ದಾರೆ. ಈ ಸಂದರ್ಭ 100ರಷ್ಟು ಕ್ಲಬ್‌ಗಳಿಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲಿದ್ದಾರೆ. ರಾಜ್ಯದ 12 ಕ್ಲಬ್‌ಗಳ ಸದಸ್ಯರ ತಂಡ ಬೆಂಗಳೂರು, ನೆಲ್ಲೂರು, ವಿಜಯವಾಡ, ಹೈದರಾಬಾದ್‌, ಸೊಲ್ಹಾಪುರ, ಶಿರ್ಡಿ, ಮುಂಬಯಿ, ಪುಣೆ, ರತ್ನಗಿರಿ, ಗೋವಾ, ಉಡುಪಿ, ಕೋಯಿಕ್ಕೋಡ್‌, ಮೈಸೂರು ಮೂಲಕ ಸಾಗಿ ಮತ್ತೆ ಡಿ. 18ರಂದು ಬೆಂಗಳೂರು ತಲುಪಲಿದೆ. 20 ಬೈಕ್‌, ಒಂದು ಕಾರು ಯಾತ್ರೆ ತೆರಳಲಿವೆ. ತಂಡದಲ್ಲಿ ನಾಲ್ವರು ವೈದ್ಯರಿದ್ದಾರೆ. ಮೆಡಿಕಲ್‌ ಕಿಟ್‌ಗಳನ್ನು ಇರಿಸಿಕೊಳ್ಳಲಾಗಿದೆ.

ತಂಡದಲ್ಲಿ ಕುಂದಾಪುರದ ರೋಟರಿ ಕ್ಲಬ್‌ ರಿವರ್‌ಸೈಡ್‌ನ‌ ಅಧ್ಯಕ್ಷ ಕೌಶಿಕ್‌ ಯಡಿಯಾಳ್‌ ಇರಲಿದ್ದಾರೆ. ಡಿ. 13ರಂದು ಯಾತ್ರೆ ಕುಂದಾಪುರ ತಲುಪಲಿದೆ. ಸಂಗ್ರಹಿಸಿದ ನಿಧಿಯನ್ನು ಸರಕಾರದ ಕೋವಿಡ್ ಔಷಧ ನಿಧಿಗೆ ನೀಡಲಾಗುತ್ತದೆ. ಅನುದಾನ ನೀಡಿದ ಸಂಘ ಸಂಸ್ಥೆಯವರಿಗೆ ಸರಕಾರ ಲಸಿಕೆಗಳನ್ನು ನೀಡಲಿದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಮತ್ತು ಅರ್ಹ ಫ‌ಲಾನುಭವಿಗಳಿಗೆ ಉಚಿತವಾಗಿ ವಿತರಿಸಲು ಸರಕಾರದಿಂದ ಔಷಧ ಖರೀದಿಯನ್ನು ಕೂಡ ನಡೆಸಲಾಗುವುದು ಎಂದು ಕೌಶಿಕ್‌ ಯಡಿಯಾಳ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next