Advertisement

Haryana ಸೋಲಿಗೆ ನಿಮ್ಮ ಸ್ವಾರ್ಥ ಕಾರಣ: ರಾಹುಲ್‌ ಗಾಂಧಿ ಗರಂ?

01:42 AM Oct 11, 2024 | Team Udayavani |

ಚಂಡೀಗಢ: “ರಾಜ್ಯ ಕಾಂಗ್ರೆಸ್‌ ನಾಯಕರ ಸ್ವಾರ್ಥವೇ ಹರಿಯಾಣದಲ್ಲಿ ಪಕ್ಷದ ಸೋಲಿಗೆ ಕಾರಣ. ಇಲ್ಲದಿದ್ದರೆ ನಾವೇ ಗೆಲ್ಲುತ್ತಿದ್ದೆವು.’ಇದು ಚುನಾವಣೆಗೂ ಮುನ್ನವೇ ಆಂತರಿಕ ಕಚ್ಚಾಟದಲ್ಲಿ ತೊಡ­ಗಿದ್ದ ರಾಜ್ಯ ನಾಯಕರ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ ಪರಿ.

Advertisement

ನಿರೀಕ್ಷೆಯೆಲ್ಲ ಹುಸಿಯಾಗುವಂತೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುಂಡ ಹಿನ್ನೆಲೆಯಲ್ಲಿ ಫ‌ಲಿತಾಂ­ಶದ ಕುರಿತು ಚರ್ಚಿಸಲು ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ನಿವಾಸದಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. ಇದರಲ್ಲಿ ರಾಹುಲ್‌ ಗಾಂಧಿ, ಹೂಡಾ, ಗೆಹ್ಲೋಟ್‌ ಸಹಿತ ಪ್ರಮುಖ ನಾಯಕರು ಹಾಜರಾಗಿ­ದ್ದರು. ಈ ವೇಳೆ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ರಾಹುಲ್‌, “ನಮ್ಮ ಸೋಲಿನ ಬಗ್ಗೆ ಇವಿಎಂಗಳು ಮತ್ತು ಚುನಾವಣ ಆಯೋಗವೇ ಉತ್ತರಿಸಬೇಕಿದೆ.

ಎಣಿಕೆ ವೇಳೆ ಏನು ಲೋಪವಾಗಿದೆ ಎಂಬ ಬಗ್ಗೆ ನಮಗೆ ವಿಸ್ತೃತ ವರದಿ ಬೇಕಿದೆ’ ಎಂದರಲ್ಲದೆ, “ಕೆಲವು ರಾಜ್ಯ ನಾಯಕರಿಗೆ ಪಕ್ಷಕ್ಕಿಂತ ಸ್ವಹಿತವೇ ಮುಖ್ಯವಾಯಿತು’ ಎಂದು ಹೇಳಿ ಸಿಟ್ಟಿನಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಈ ಸಭೆಗೆ ಸುರ್ಜೇವಾಲ ಮತ್ತು ಕುಮಾರಿ ಸೆಲ್ಜಾ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next