Advertisement

ಸ್ವಂತ ಖರ್ಚಿನಿಂದ ತೆರವು ಕಾರ್ಯಕ್ಕೆ ಮುಂದಾದ ಯುವಕರು

06:25 AM Jun 21, 2018 | Team Udayavani |

ಮಲ್ಪೆ: ಕಡಿದ ಮರದ ತುಂಡುಗಳು ರಸ್ತೆಯ ಬದಿಯ ಅಂಚನ್ನು ಚಾಚಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದು ಇದನ್ನು ಮನಗಂಡ ಸ್ಥಳೀಯ ಯುವಕರು ಬೃಹತ್‌ ಗಾತ್ರದ ಮರದ ತುಂಡನ್ನು ಹಿಟಾಚಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

Advertisement

ಕಳೆದ ಮೂರು ವಾರದ ಹಿಂದೆ ಸುರಿದ ಮಳೆಗೆ ಕಲ್ಮಾಡಿ ಮುಖ್ಯ ರಸ್ತೆಗೆ ಬೃಹತ್‌ ಗಾತ್ರದ ಮರ ಬಿದ್ದು ಅದನ್ನು ನಗರಸಭೆಯ ವತಿಯಿಂದ ಕಡಿದು ತೆರವುಗೊಳಿಸಲಾಗಿತ್ತು. ಆದರೆ ಕಡಿದ ಮರದ ತುಂಡುಗಳು ಮಾತ್ರ ರಸ್ತೆಯಲ್ಲೇ ಬಾಕಿ ಉಳಿದಿದ್ದವು. ರಸ್ತೆಗೆ ಚಾಚಿಕೊಂಡಿದ್ದ ಮರದ ತುಂಡುಗಳು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದವು. ಮರದ ಚೂಪಾದ ಭಾಗಗಳು ರಸ್ತೆಯ ಬದಿಯಲ್ಲಿ ಸಾಗುವ ದ್ವಿಚಕ ವಾಹನ ಸಾವಾರಿಗೆ ತಾಗಿ ಅನಾಹುತಗಳು ನಡೆಯುತ್ತಿದ್ದವು.ಈ ಬಗ್ಗೆ ನಾಗರಿಕರು ಹಲವು ಬಾರಿ ನಗರಸಭೆಗೆ ದೂರಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಮಾಡಿಯ ಸ್ಥಳೀಯ ಯುವಕರು ಸುಂದರ್‌ ಜೆ. ಕಲ್ಮಾಡಿ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಹಿಟಾಚಿ ಮೂಲಕ ಮರದ ತುಂಡುಗಳನ್ನು ತೆರವುಗೊಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

 ಮನವಿಗೆ ಸ್ಪಂದಿಸಲಿಲ್ಲ
ರಸ್ತೆ ಬದಿಯ ಮರವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದೇªವೆ. ಯಾವ ಸ್ಪಂದನೆಯೂ ದೊರೆಯದಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ಸ್ವಂತ ಖರ್ಚು ಹಾಕಿ ಈ ಕಾರ್ಯಕ್ಕೆ ಮುಂದಾಗಿದೇªವೆ. 
– ಸುಂದರ್‌ ಜೆ. ಕಲ್ಮಾಡಿ,ಸಮಾಜ ಸೇವಕರು

Advertisement

Udayavani is now on Telegram. Click here to join our channel and stay updated with the latest news.

Next