Advertisement

ಪಡುಬಿದ್ರಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

06:22 PM May 26, 2022 | Team Udayavani |

ಪಡುಬಿದ್ರಿ: ಬಾಡಿಗೆ ಮನೆ ಮಾಲೀಕರ ಬಾವಿಗೆ ಹಾರಿ ಆತ್ಮಹತ್ಯೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಜಮಾಡಿ ಗ್ರಾಮದ ಕೋಡಿ ಎಂಬಲ್ಲಿ  ನಡೆದಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾ| ಬಂಕಿಕೂಡ್ಲ ಗ್ರಾಮದ ಯುವತಿ ಗೋದಾವರಿ (24) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಈಕೆ ಕ್ವಾಲಿಟಿ ಮೆರೈನ್‌  ಪುಡ್‌ ಹೆಸರಿನ ಫ್ಯಾಕ್ಟರಿಯಲ್ಲಿ  ಮೀನು ಕಟಿಂಗ್‌ ಕೆಲಸ ಮಾಡಿಕೊಂಡಿದ್ದಳು. ಹೆಜಮಾಡಿ ಕೋಡಿಯಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇತರ ಮೂವರು ಹುಡುಗಿಯರ ಜೊತೆ ವಾಸ ಮಾಡಿಕೊಂಡಿದ್ದಳು. ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ರಾಜು ಕರ್ಕೇರ ಅವರಿಗೆ ಸೇರಿರುವ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ. ಗೋದಾವರಿಯ ಮೃತದೇಹವು ಇಂದು ಬೆಳಿಗ್ಗೆ ಬಾವಿಯಲ್ಲಿ ತೇಲುತ್ತಿದ್ದುದು ಪತ್ತೆಯಾಗಿದೆ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next