Advertisement

ನನ್ನ ತಮ್ಮನ ಕೊಲೆಯಲ್ಲಿ ಇನ್ನೂ ಕೆಲ ಗಣ್ಯ ವ್ಯಕ್ತಿಗಳ ಕೈವಾಡ ಇದೆ: ಯೋಗೀಶ ಗೌಡ ಸಹೋದರಿ

05:03 PM Nov 05, 2020 | keerthan |

ಧಾರವಾಡ: ನನ್ನ ತಮ್ಮನ ಕೊಲೆಯಲ್ಲಿ ಇನ್ನೂ ಕೆಲ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರನ್ನೂ ಕರೆದು ವಿಚಾರಣೆ ಮಾಡಬೇಕು ಎಂದು ಯೋಗೀಶ್ ಗೌಡ ಸಹೋದರಿ ಮಹಾದೇವಿ ಹೇಳಿದ್ದಾರೆ.

Advertisement

ಗೋವನಕೊಪ್ಪದ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ತಮ್ಮನ ಕೊಲೆ ನಡೆದ ನಾಲ್ಕು ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರ ವಿನಯ್ ಹಾಗೂ ವಿಜಯ ಕುಲಕರ್ಣಿ ಅವರನ್ನು ವಿಚಾರಣೆ ನಡೆಸುತ್ತಿರುವುದು ಖುಷಿ ತಂದಿದೆ. ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ.

ನ್ಯಾಯ ಸಿಗುವ ಭರವಸೆಯಿದೆ

ನನ್ನ ಮಗನ ಸಾವಿಗೆ ನ್ಯಾಯ ಸಿಗುವ ಭರವಸೆಯಿದೆ. ಇಂದು ವಿನಯ ಕುಲಕರ್ಣಿ ಅವರನ್ನ ವಿಚಾರಣೆಗೊಳಪಡಿಸಿದ್ದು, ಖುಷಿ ಕೊಟ್ಟೈತಿ ಎಂದು ಯೋಗೀಶ್ ಗೌಡ ಅವರ ತಾಯಿ ತುಂಗಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಗೋವನಕೊಪ್ಪದ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ತುಂಗಮ್ಮ, ನನ್ನ ಮಗನ ಹತ್ಯೆಯಾಗಿ 4 ವರ್ಷ ಆಯ್ತು. ಅವನ ಆತ್ಮಕ್ಕೆ ಶಾಂತಿ ಸಿಗೋ ಭರವಸೆ ಐತ್ರಿ. ನನ್ನ ಮಗ ಗುರುನಾಥಗೌಡ ಇದರ ಸಂಬಂಧ ಬಾಳ ಹೋರಾಟ ಮಾಡ್ಯಾನ್ರಿ ಎಂದಿದ್ದಾರೆ.

ನಮ್ಮಂತೆ ಅವರನ್ನೂ ವಿಚಾರಣೆಗೆ ಕರೆದಿದ್ದಾರೆ: ಮಲ್ಲಮ್ಮ ಗೌಡರ

Advertisement

ನನ್ನ ಪತಿಯ ಹತ್ಯೆ ವಿಚಾರಣೆಗೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಡೆಸುತ್ತಿದ್ದು, ನಮ್ಮನ್ನು ವಿಚಾರಣೆ ನಡೆಸಿದಂತೆ ವಿನಯ ಕುಲಕರ್ಣಿ ಅವರನ್ನೂ ವಿಚಾರಣೆ ನಡೆಸುತ್ತಿದೆ ಎಂದು ಯೋಗೀಶಗೌಡ ಪತ್ನಿ ಮಲ್ಲಮ್ಮ ಗೌಡರ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಒಬ್ಬಳೇ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬಿಜೆಪಿಯಲ್ಲಿದ್ದ ಅನೇಕ ಮಹಿಳೆಯರೂ ಕಾಂಗ್ರೆಸ್ ಸೇರಿದ್ದಾರೆ. ಆದರೆ, ನಾನು ಕಾಂಗ್ರೆಸ್ ಪಕ್ಷ ಸೇರಿದ್ದೇ ಒಂದು ದೊಡ್ಡ ಸುದ್ದಿಯಾಗಿದೆ. ನನ್ನ ಪತಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂದಿದ್ದರು. ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐನಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next