Advertisement

ಬುಲಂದ್‌ಶಹರ್‌ ಹಿಂಸೆ ರಾಜಕೀಯ ಪಿತೂರಿ: ಸಿಎಂ ಯೋಗಿ ಆದಿತ್ಯನಾಥ್‌

07:24 PM Dec 19, 2018 | udayavani editorial |

ಲಕ್ನೋ : ‘ಉತ್ತರ ಪ್ರದೇಶದ ಬುಲಂದ್‌ಶಹರ್‌ ಹಿಂಸೆಯು ರಾಜಕೀಯ ನೆಲೆ ಕಳೆದುಕೊಂಡವರು ನಡೆಸಿದ ರಾಜಕೀಯ ಪಿತೂರಿಯಾಗಿದೆ’ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

‘ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ’ ಎಂದು ಆರೋಪಿಸಿ ರಾಜ್ಯ ವಿಧಾನ ಸಭೆಯ ಕಲಾಪವನ್ನು ಹಾಳು ಮಾಡಿರುವ ವಿರೋಧ ಪಕ್ಷಗಳಿಗೆ ಸಿಎಂ ಯೋಗಿ ಖಡಕ್‌ ಉತ್ತರ ನೀಡಿದ್ದಾರೆ. 

ಉತ್ತರ ಪ್ರದೇಶದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಂಪೂರ್ಣ ಪ್ರಶ್ನಾ ವೇಳೆಯನ್ನು  ಹಾಳು ಗೆಡಹಿದ ಸಮಾಜವಾದಿ ಮತ್ತು ಕಾಂಗ್ರೆಸ್‌ ಪಕ್ಷದ ಸದಸ್ಯರು ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಕುಸಿದು ಬಿದ್ದಿದೆ, ರೈತರ ಸಮಸ್ಯೆ ತೀವ್ರವಾಗಿ ಬಿಗಡಾಯಿಸಿದೆ, ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿ ಸದನ ಕಲಾಪ ನಡೆಯದಂತೆ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next