Advertisement

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

11:41 PM Oct 14, 2024 | Team Udayavani |

ರಾಮನಗರ: ಆಗಸ್ಟ್‌ನಲ್ಲೇ ಸಮಾನ ಮನಸ್ಕರ ಸಭೆ ನಡೆಸುವ ಮೂಲಕ ಎನ್‌ಡಿಎ ಟಿಕೆಟ್‌ ಇಲ್ಲದಿದ್ದರೆ ಬಂಡಾಯವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದ ಯೋಗೇಶ್ವರ್‌, ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು. ಕುಮಾರಸ್ವಾಮಿ ಹೇಳಿಕೆಗಳು ಟಿಕೆಟ್‌ ಸಿಗುವುದು ಕಷ್ಟ ಎಂಬ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಯೋಗೇಶ್ವರ್‌ ಬುಧವಾರ ಬಿಜೆಪಿ ಪ್ರಮುಖರ ಸಭೆ ಕರೆದಿದ್ದಾರೆ.

Advertisement

ದಿಲ್ಲಿಗೆ ಹೋಗಿ ಬಂದ ಬಳಿಕ ಇದೇ ಮೊದಲ ಬಾರಿಗೆ ಯೋಗೇಶ್ವರ್‌ ಪಕ್ಷದ ಸಭೆ ಆಯೋಜಿಸಿದ್ದಾರೆ. ಉಪ ಚುನಾವಣೆಯಲ್ಲಿ ಎನ್‌ಡಿಎ ಟಿಕೆಟ್‌ ಕೈತಪ್ಪಿದರೆ ಏನು ಮಾಡಬೇಕು, ಟಿಕೆಟ್‌ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿರುವುದಾಗಿ ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next