Advertisement

ಸದೃಢ ಭಾರತಕ್ಕೆ ಯೋಗ ಸಂದೇಶ

11:05 AM Jun 24, 2018 | Team Udayavani |

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ರಾಜಧಾನಿ ತುಂಬೆಲ್ಲಾ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ ಮುಗಿಲು ಮುಟ್ಟಿತ್ತು. ಅಂಥದ್ದೇ ಸಂಭ್ರಮದ ವಾತಾವರಣ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಶನಿವಾರ ಮತ್ತೂಮ್ಮೆ ಕಂಡುಬಂತು.

Advertisement

ಅದಮ್ಯ ಚೇತನ ಸಂಸ್ಥೆ ಹಾಗೂ ಬಿಎನ್‌ಎಂ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ ವತಿಯಿಂದ ಶನಿವಾರ ಕಿತ್ತೂರು ರಾಣಿ ಚೆನ್ಮಮ್ಮ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಹಮ್ಮಿಕೊಳ್ಳಲಾಗಿತ್ತು. 50 ಶಾಲೆಗಳ 5 ಸಾವಿರ ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶಿಸಿ “ಸದೃಢ ಭಾರತಕ್ಕೆ ಯೋಗ’ ಎಂಬ ಸಂದೇಶ ಸಾರಿದರು. 

ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಅನಂತಕುಮಾರ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್‌, ಭಾಷಾಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಯೋಗಾಸನಗಳನ್ನು ಮಾಡಿದರು. ಪವನಮುಕ್ತಾಸನ, ಭುಜಂಗಾಸನ, ಮಕರಾಸನ, ವಕ್ರಾಸನ ಸೇರಿದಂತೆ ಒಟ್ಟು 15 ಆಸನಗಳನ್ನು ಮಾಡಿದರು. ನಾಡಿಶುದ್ಧಿ ಪ್ರಾಣಾಯಮ, ಬ್ರಾಹ್ಮರಿ ಪ್ರಾಣಾಯಮ ಕೂಡ ಮಾಡಲಾಯಿತು.

ಯೋಗಾಸನ ಪ್ರದರ್ಶನಕ್ಕೂ ಮುನ್ನ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು 60 ವರ್ಷ ದಾಟಿದ ನಂತರ ಯೋಗಾಸನ ಮಾಡುವುದಲ್ಲ. ಯೋಗ ಆರೋಗ್ಯಕ್ಕಿಂತಲೂ ವಿಸ್ತಾರವಾದುದು. ದೇಶದ ಅತಿದೊಡ್ಡ ಕಾಯಿಲೆಯಾಗಿರುವ ಖನ್ನತೆಗೂ ಯೋಗ ದಿವ್ಯಔಷಧ. ಮನಸನ್ನು ಬಲಿಷ್ಟಗೊಳಿಸಿ ಎಲ್ಲ ಅಸಾಧ್ಯಗಳನ್ನು ಸಾಧ್ಯವಾಗಿಸುವುದು ಯೋಗದ ಶಕ್ತಿ ಎಂದು ಹೇಳಿದರು.

5 ವರ್ಷಗಳ ಹಿಂದೆ ಯೋಗ ಕೇಸರೀಕರಣದ ಪ್ರತೀಕ ಎಂದು ಬುದ್ಧಿ ಜೀವಿಗಳು ಲೇವಡಿ ಮಾಡಿದ್ದರು. ಆದರೆ, ಇಂದು ಇಡೀ ವಿಶ್ವವೇ ಆರೋಗ್ಯಕ್ಕೆ ಯೋಗ ಮುಖ್ಯವೆಂದು ಒಪ್ಪಿಕೊಂಡಿದೆ ಎನ್ನುವುದಾದರೆ ಅದಕ್ಕೆ ಎಷ್ಟೊಂದು ಗೌರವವಿದೆ ಎಂಬುದು ಸಾಬೀತಾಗಿದೆ ಎಂದರು.

Advertisement

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಜನಪ್ರಿಯಗೊಳಿಸಿದರು. ಇಂದು ವಿಶ್ವದ 176 ದೇಶಗಳು ಯೋಗವನ್ನು ಒಪ್ಪಿಕೊಂಡು ವಿಶ್ವ ಯೋಗ ದಿನ ಆಚರಿಸುತ್ತಿವೆ. ಎಲ್ಲ ಜೀವನಶೈಲಿಗಳಲ್ಲಿನ ಸಮಸ್ಯೆಗಳಿಗೂ ಯೋಗ ಪರಿಹಾರ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next