Advertisement

ಕೋವಿಡ್‌ ವಿರುದ್ಧ ನಗರದಲ್ಲಿ ಯೋಗಾಯೋಗ

06:16 AM Jun 22, 2020 | Lakshmi GovindaRaj |

ಬೆಂಗಳೂರು: ಆರನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಭಾನುವಾರ ನಗರದ ಹಲವೆಡಗಳಲ್ಲಿ ಯೋಗ ಕುರಿತ ಕಾರ್ಯಕ್ರಮಗಳು ನಡೆದು ಜನಮನ ಸೆಳೆದವು. ಕೋವಿಡ್‌ 19 ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲಿಯೇ ಯೋಗ ದಿನಚಾರಣೆ ಮಡಿದರು. ಇನ್ನೂ ಕೆಲವು ಸಂಘ- ಸಂಸ್ಥೆಗಳ ಸದಸ್ಯರು ನಿರ್ದಿಷ್ಟ ಅಂತರ ಕಾಯ್ದುಕೊಂಡು ಉದ್ಯಾನದಲ್ಲಿ ಯೋಗಾಸನ ಮಾಡಿ ಗಮನ ಸೆಳೆದರು. ಹಲವು ಕಾರ್ಯಕ್ರಮಗಳು ಫೇಸ್‌ ಬುಕ್‌  ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾದವು.

Advertisement

ಅಧಿಕ ಸಂಖ್ಯೆಯಲ್ಲಿ ಜನರು ಮನೆಯಿಂದಲೇ ಹಲವು ಸಂಘ,ಸಂಸ್ಥೆಗಳು ಹಮ್ಮಿಕೊಂಡಿದ್ದ ಯೋಗ ಕುರಿತ ಕಾರ್ಯಕ್ರಮಗಳನ್ನು ಸಾಮಾಜಿಕ  ಜಾಲತಾಣಗಳಲ್ಲಿ ವೀಕ್ಷಿಸಿದರು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ತನಕ ಯೋಗಾಭ್ಯಾಸ ನಡೆಯಿತು. ಆರನೇ ವಿಶ್ವ ಅಂತಾರಾಷ್ಟ್ರೀಯ ಯೋಗಾದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯಪಾಲ ವಾಜುಭಾಯಿವಾಲ ಅವರು ರಾಜ ಭವನದಲ್ಲಿ ಯೋಗಾಭ್ಯಾಸ ನಡೆಸಿ ಗಮನ ಸೆಳೆದರು. ಯೋಗದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸ ಬಹುದು. ಜತೆಗೆ ದೈಹಿಕ ಮಾನಸಿಕ ಸದೃಢತೆಗೂ ಯೋಗ ಮತ್ತಷ್ಟು ಸಹಕಾರಿಯಾಗಲಿದೆ  ಎಂದು ರಾಜ್ಯಪಾಲರು ತಿಳಿಸಿದರು.

ಲಾಲ್‌ಬಾಗ್‌ನಲ್ಲಿ ಯೋಗ: ಲಾಲ್‌ಬಾಗ್‌ನಲ್ಲೂ ಕೂಡ ವಿಶ್ವ ಯೋಗಾ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಯೋಗಾಭ್ಯಾಸ ಮಾಡಲಾಯಿತು. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ಗಮನ ಸೆಳೆದರು. ಯೋಗ ಗಂಗೋತ್ರಿ ಟ್ರಸ್ಟ್‌ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯೋಗ ಗಂಗೋತ್ರಿ ಸಂಸ್ಥೆಯ ಗುರು ಡಾ.ಎಚ್‌.ಆರಾಧ್ಯ ಮಾತನಾಡಿ, ಯೋಗ ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದು ತಿಳಿಸಿದರು.

ಅಪಾರ್ಟ್‌ ಮೆಂಟ್‌ ನಿವಾಸಿಗಳ ಯೋಗ: ನಗರದ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಯೋಗ ದಿನ ಆಚರಿಸಲಾಯಿತು. ನಾಗರಭಾವಿಯ ಎಸ್‌.ಜಿ.ಆರ್‌ ರೆಸಿಡೆನ್ಸಿಯಲ್ಲಿ ಮಹಿಳಾ ನಿವಾಸಿಗಳು ಯೋಗಾಭ್ಯಾಸ ನಡೆಸಿದರು. ಈ ವೇಳೆ  ಮಾತನಾಡಿದ ನಗರದ ವಾಹಿನಿ ಕಳೆದ ಸುಮಾರು 90 ದಿನಗಳಿಂದ ಸತತವಾಗಿ ಮುಂಜಾನೆಯ ಯೋಗಾಭ್ಯಾಸ ನಡೆದಿದೆ. ನಮ್ಮ ದೇಹ ಹಾಗೂ ಮನಸ್ಸು ಆರೋಗ್ಯ, ಲವಲವಿಕೆಯಿಂದಿರಲು ಈ ಯೋಗಾಭ್ಯಾಸ ಸಹಾಯ ಮಾಡಿದೆ  ಎಂದರು.

ನೆಮ್ಮದಿಯ ಜೀವನಕ್ಕೆ ಯೋಗ ಸಹಕಾರಿ: ಬೆಂಗಳೂರು ವಿವಿಯಲ್ಲೂ ಯೋಗ ದಿನಾಚರಣೆ ನಡೆಯಿತು. ಈ ವೇಳೆ ಮಾತನಾಡಿದ ಬೆಂಗಳೂರು ವಿವಿ ಕುಲಪತಿ ಪೊ›.ಕೆ.ಆರ್‌. ವೇಣುಗೋಪಾಲ್‌, ಕೋವಿಡ್‌ 19 ಸೃಷ್ಟಿಸಿರುವ ಮಾನಸಿಕ  ಮತ್ತು ದೈಹಿಕ ಸಮಸ್ಯೆಗಳಿಂದ ಹೊರಬರಲು ಯೋಗ, ಪ್ರಾಣಾಯಾಮ ಉತ್ತಮ ಸಾಧನ. ನಮ್ಮ ಹಿರಿಯರು ಸಾಕಷ್ಟು ಸೂತ್ರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವುಗಳಲ್ಲಿ ಯೋಗವು ಒಂದು ಎಂದು ತಿಳಿಸಿದರು.

Advertisement

ಪತಂಜಲಿ ಯೋಗ ಟ್ರಸ್ಟ್‌ನ  ಶ್ರೀಪ್ರಕಾಶ್‌ ಯೋಗಿ ಗುರೂಜಿ ಮಾತನಾಡಿ, ಸಾಕಷ್ಟು ದಾಳಿಗಳ ನಡುವೆಯೂ ಭಾರತೀಯರು ಪ್ರಬಲವಾಗಿ ಉಳಿದಿರಲು ಕಾರಣವೇ ಯೋಗ ಮತ್ತು ಅಧ್ಯಾತ್ಮ. ಯೋಗ ನಮಗೆ, ಅಂತರ್ಮುಖೀಯಾಗಿ ಸಂಚರಿಸಲು ಸಹಾಯ  ಮಾಡುತ್ತದೆ ಎಂದು ಹೇಳಿದರು. ಬೆಂಗಳೂರು ವಿವಿ ಯೋಗ ಕೇಂದ್ರದ ಮುಖ್ಯಸ್ಥರಾದ ಪೊ›. ಕೆ. ರಾಮಕೃಷ್ಣಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕೋವಿಡ್‌ -19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಪರಿಣಾಮ  ಹಲವು ಯೋಗ ಕೇಂದ್ರಗಳು, ತರಬೇತಿ ಸಂಸ್ಥೆಗಳು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಆಸನಗಳನ್ನು ಪ್ರಸ್ತುತ ಪಡಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next