Advertisement

Yellapur 2 ಲಕ್ಷ ರೂ.ಮೌಲ್ಯದ ಶ್ರೀಗಂಧ ಸಹಿತ ಆರೋಪಿ ಬಂಧನ

11:37 PM Aug 17, 2023 | Team Udayavani |

ಯಲ್ಲಾಪುರ: ಅರಣ್ಯ ವಿಭಾಗದ ಮಂಚಿಕೇರಿ ವಲಯದ ಮಂಚಿಕೇರಿ ಬೀಟ ವ್ಯಾಪ್ತಿಯ ಮಂಚಿಕೇರಿಯ ಜನತಾ ಕಾಲೋನಿಯಲ್ಲಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಗಂಧದ ಕಟ್ಟಿಗೆಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದು ಓರ್ವನನ್ನು ಬಂಧಿಸಿದೆ.

Advertisement

52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂಧದ ಕಟ್ಟಿಗೆಯನ್ನು ಗುರುವಾರ ಜಪ್ತಿಪಡಿಸಿ ಆರೋಪಿ ಗಣೇಶ ಸೋಮು ಲಮಾಣಿ ಮಂಚಿಕೇರಿ ಎಂಬಾತನನ್ನು ಬಂಧಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಜಿ. ಹೆಗಡೆ ರವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಹಿಮವತಿ ಭಟ್ ರವರ ಮುಂದಾಳತ್ವದಲ್ಲಿ ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿ ಅಮಿತಕುಮಾರ ಚವ್ಹಾಣ ರವರ ನೇತೃತ್ವದ ಕಾರ್ಯಾಚರಣೆಯ ತಂಡದಲ್ಲಿ ಮಂಚಿಕೇರಿ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಪವನಕುಮಾರ ಲೋಕುರ,ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ ಪವಾರ , ಸಂಗಮೇಶ ಅಂಗಡಿ, ಕಲ್ಲಪ್ಪ. ಬರದೂರ, ಮಂಜುನಾಥ ಆಗೇರ, ಜಗದೀಶ ಪಾಲಕನವರ , ವಿರಾಜ್ ನಾಯಕ, ಹಾಗೂ ಗಸ್ತು ವನಪಾಲಕರಾದ ವಿಷ್ಣು ಪೂಜಾರಿ ಮತ್ತು ವಾಹನ ಚಾಲಕರಾದ ಗಂಗಾಧರ ರೆಡ್ಡಿ, ಮಂಜು ನಾಯ್ಕ ಮತ್ತು ಅರಣ್ಯ ವೀಕ್ಷಕರುಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next