Advertisement

ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಮಾಸ್ ಲೀಡರ್ ಯಾರು ಇಲ್ಲ : ಎಂ.ಪಿ ಕುಮಾರಸ್ವಾಮಿ

02:51 PM Jul 20, 2021 | Team Udayavani |

ಚಿಕ್ಕಮಗಳೂರು : ಸಿಎಂ ಬದಲಾವಣೆ ಬೇಡವೇ ಬೇಡ ಯಡಿಯೂರಪ್ಪನವರು ಬಿಟ್ರೆ ಬಿಜೆಪಿಯಲ್ಲಿ ಮಾಸ್ ಲೀಡರ್ ಯಾರು ಇಲ್ಲ ಎಂದು ಸಿಎಂ ಯಡಿಯೂರಪ್ಪ ಪರ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ.

Advertisement

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡೋದು ಬೇಡ. ನಾನೊಬ್ಬ ಶಾಸಕನಾಗಿ ಹೈಕಮಾಂಡ್ ಗೆ ಮನವಿ ಮಾಡ್ತೇನೆ. ಯಡಿಯೂರಪ್ಪ ನವರೇ ಸಿಎಂ ಆಗಿ ಮುಂದುವರೆಯಲಿ. ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ ಬಿಜೆಪಿಗೆ ತುಂಬಲಾರದ ನಷ್ಟ. ಯಡಿಯೂರಪ್ಪನವರಿಗೆ ಯಡಿಯೂರಪ್ಪನವರೇ ಸಮ.

ಯಡಿಯೂರಪ್ಪನವರೇ ಮಿಕ್ಕಿದ ಅವಧಿಗೂ ಸಿಎಂ ಆಗಿ ಮುಂದುವರಿಬೇಕೆಂದು ಜನರು ಅಪೇಕ್ಷೆ ಪಡುತ್ತಿದ್ದಾರೆ. ಬದಲಾವಣೆ ಮಾಡಿದರೆ ಬಿಜೆಪಿ ಮುಂದಿನ ದಿನಗಳಲ್ಲಿ ಅದರ ಫಲ ಅನುಭವಿಸಲಿದೆ. ಮುಂದಿನ ಚುನಾವಣೆವರೆಗೆ ಯಡಿಯೂರಪ್ಪ ನವರೇ ಮುಂದುವರೆಯಲಿ. ರಾಜ್ಯದ ಜನರು ಕೂಡ ಬಿಎಸ್ ವೈ ಸಿಎಂ ಆಗಿ ಮುಂದುವರೆಯಲಿ ಅಂತಾ ಹೇಳ್ತಾ ಇದ್ದಾರೆ ಎಂದು ಎಂ ಪಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next