Advertisement

Yatnal; ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್‍ಗೆ ಹೈಕೋರ್ಟ್ ತಡೆ

06:24 PM Jan 29, 2024 | Team Udayavani |

ವಿಜಯಪುರ: ಕಾಂಗ್ರೆಸ್ ಸರ್ಕಾರ ಸಿದ್ಧಸಿರಿ ಸಕ್ಕರೆ ಹಾಗೂ ಎಥೆನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗೂ ಮುಚ್ಚುವ ಷಡ್ಯಂತ್ರಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯ ಸೋಮವಾರ ತಡೆ ನೀಡಿದೆ ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಯತ್ನಾಳ್, ಸಿದ್ಧಸಿರಿ ಸೌಹಾರ್ದ ಸಕ್ಕರೆ ಕಾರ್ಖಾನೆಯನ್ನೇ ನಂಬಿರುವ ಸಾವಿರಾರು ರೈತರು, ಉದ್ಯೋಗಿಗಳ ಬಗ್ಗೆ ಎಳ್ಳಷ್ಟೂ ಕರುಣೆ ತೋರದೆ ಸರ್ಕಾರ ಷಡ್ಯಂತ್ರ ನಡೆಸಿತ್ತು. ಈ ಷಡ್ಯಂತ್ರವನ್ನು ರಾಜಕೀಯವಾಗಿ ಎದುರಿಸಿದ್ದು, ನಮ್ಮ ಕಾರ್ಖಾನೆಗೆ ನೀಡಿದ್ದ ನೋಟಿಸ್‍ಗೆ ಉಚ್ಛ ನ್ಯಾಯಾಲಯ ತಡೆ ನೀಡಿದೆ ಎಂದು ವಿವರಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಇಲ್ಲದ ಮಾಲಿನ್ಯ ಈಗ ಈ ಕುರುಡ ಸರ್ಕಾರಕ್ಕೆ ಕಾಣಿಸಿದೆ. ಸರ್ಕಾರ ನೋಟಿಸ್ ನೀಡಿರುವುದರ ಹಿಂದೆ ಇರುವ ಭ್ರಷ್ಟರ ವಿರುದ್ಧ ಹೋರಾಟ ಇನ್ನೂ ಇಮ್ಮಡಿಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next