Advertisement

ಅಂಧ ಮಕ್ಕಳ ಸಹಾಯಕ್ಕೆ ಬಂದ ಯಶೋಮಾರ್ಗ

10:08 AM Aug 14, 2019 | Team Udayavani |

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಜಲಪ್ರಳಯದಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇದೇ ವೇಳೆ ಪ್ರವಾಹದಿಂದ ಏನಾಗುತ್ತಿದೆ ಎಂದು ದಿಕ್ಕೆ ತೋಚದೆ ಸುಮಾರು 70 ಜನ ಅಂಧ ಮಕ್ಕಳು, ಗದಗ ಜಿಲ್ಲೆಯ ಹೊಲೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಸಿಲುಕಿಕೊಂಡಿದ್ದರು.

Advertisement

ನೀರಿನ ಹೊಡೆತದಿಂದ ಮುಳುಗುವ ಸ್ಥಿತಿಯಲ್ಲಿದ್ದ ಶಾಲೆಯ ಮಕ್ಕಳನ್ನು ಗಮನಿಸಿದ ನಟ ಯಶ್‌ ಅವರ ಯಶೋಮಾರ್ಗ ಸಂಸ್ಥೆಯ ಮೂಲಕ ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಸದ್ಯಕ್ಕೆ ಮಕ್ಕಳನ್ನು ಧಾರವಾಡದ ಚೈತನ್ಯ ಕಲಾ ಮಂಟಪಕ್ಕೆ ಸ್ಥಳಾಂತರಿಸಿದ್ದು, ಮಕ್ಕಳಿಗೆ ಬೇಕಾದ ಊಟ, ತಿಂಡಿ, ಜಾಕೆಟ್‌ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಿ ಆಶ್ರಯ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next