Advertisement

ಯಲ್ಲಾಪುರ: ಸಾತೊಡ್ಡಿ ಜಲಪಾತದಲ್ಲಿ ಮುಳುಗಿ ಪ್ರವಾಸಿಗ ಮೃತ್ಯು

08:46 AM Dec 27, 2022 | Team Udayavani |

ಯಲ್ಲಾಪುರ: ಪ್ರವಾಸಕ್ಕೆಂದು‌ ಬಂದಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತದಲ್ಲಿ ಸಂಭವಿಸಿದೆ.

Advertisement

ರವಿವಾರ (ಡಿ.25) ಪ್ರವಾಸಕ್ಕೆಂದು ಬಂದಿದ್ದ ಹುಬ್ಬಳ್ಳಿಯ ಪೋತುಲ್ ರಾಮ್ ರಾವ್ (50) ಮೃತರು.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈಜಲು ನೀರಿಗೆ ಇಳಿದು ನಂತರ ಮುಳುಗಿದ್ದು ಅಲ್ಲೇ ಇದ್ದವರು ಇವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಡರಾತ್ರಿಯವರೆಗೂ ಹುಡುಕಾಡಿದರೂ ವ್ಯಕ್ತಿಯ ದೇಹ ದೊರೆಯಲಿಲ್ಲ. ಸೋಮವಾರ (ಡಿ.26) ಬೆಳಿಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ಮೃತದೇಹ ದೊರೆತಿದೆ ಎಂದು ತಿಳಿದು ಬಂದಿದೆ. ಮುಳುಗಿದ ವ್ಯಕ್ತಿ ಹುಬ್ಬಳ್ಳಿಯಲ್ಲಿ ರೇಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next