Advertisement

ಸಾಮಾಜಿಕ ಪಿಡುಗು ತೊಲಗಿಸಲು ಯತ್ನ ಯಾಕಾಪುರ

11:04 AM Dec 26, 2021 | Team Udayavani |

ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ಶರಣ ಕುಟೀರದಲ್ಲಿ ಮಾತೆ ಮರಿಲಿಂಗಮ್ಮ ಯಾಕಾಪುರ 66ನೇ ಪುಣ್ಯಸ್ಮರಣೆ ನಿಮಿತ್ತ ವಿಧವೆಯರಿಗೆ ವಸ್ತ್ರಧಾರಣೆ ಹಾಗೂ ಪ್ರಥಮ ಪಂಕ್ತಿಯಲ್ಲಿ ಊಟ ಹಾಕಲಾಯಿತು.

Advertisement

ಈ ವೇಳೆ ಮಾತನಾಡಿದ ಸಮಾಜ ಚಿಂತಕ ರಮೇಶ ಯಾಕಾಪುರ, ಸಮಾಜದಲ್ಲಿ ಅಂಟಿಕೊಂಡಿರುವ ಸಾಮಾಜಿಕ ಪಿಡುಗು ತೊಡೆದು ಹಾಕಲು ಕಳೆದ ಹತ್ತು ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸಮಾರಂಭದಲ್ಲಿ 16 ವಿಧವೆಯರಿಗೆ ಸೀರೆ ನೀಡಿ ಹೂಮಾಲೆ ಹಾಕಿ ಗೌರವಿಸಲಾಯಿತು. ಪುರಸಭೆ ಸದಸ್ಯ ನಾಗೇಂದ್ರ ಗುರಂಪಳ್ಳಿ, ಬಸವರಾಜ ಸಿರಶಿ, ಸಾಯಬಣ್ಣ ಕೆರೋಳಿ, ಅಂಬಿಕಾ, ಸುವರ್ಣಾ, ಸವಿತಾ, ನಿರ್ಮಲಾ, ಶೋಭಾ, ಶೀಲಾವತಿ, ಸಂಗೀತಾ, ಈರಮ್ಮ, ಶೈಲಜಾ, ಸುಧಾರಾಣಿ, ಸುಜಾತಾ, ಪುಷ್ಪಾವತಿ, ಕಮಲಾಬಾಯಿ, ಇಂದುಬಾಯಿ, ಹನುಮವ್ವ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next