Advertisement
ಪಟ್ಟಣದಿಂದ 2.5 ಕಿ.ಮೀ. ದೂರದ ಚಿಕ್ಕಬ್ಯಾಡಿಗೆರೆ ಸಮೀಪ 1984ರಲ್ಲಿ ನಿರ್ಮಿಸಲಾದ ಯಗಚಿ ಜಲಾಶಯ 2 ಸಾವಿರ ಹೆಕ್ಟೇರ್ ಅಚ್ಚುಕಚ್ಚು ಪ್ರದೇಶ ಹೊಂದಿದೆ. ತಾಲೂಕಿನಲ್ಲಿ 7 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಅಲ್ಲದೆ, ಬೇಲೂರು, ಅರಸೀಕೆರೆ, ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ.
Related Articles
Advertisement
ನದಿ, ಕೆರೆಗೂ ಹಬ್ಬಿದ ಕಳೆ: ಜಲಾಶಯದಲ್ಲಿ ಕಳೆಗಿಡದ ಜೊತೆಯಲ್ಲಿ ಹೂಳೂ ತುಂಬಿದ್ದು, ನೀರು ಹರಿಸಿದರೆ ಕಳೆಯೂ ಹೊರಗೆ ಬಂದು ರೈತರ ಜಮೀನು, ನದಿ, ಸಣ್ಣ ಕೆರೆಗಳನ್ನು ಸೇರುತ್ತಿದೆ. ಕೂಡಲೇ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಜಲಾಶಯದಲ್ಲಿ ಬೆಳೆದಿರುವ ಕಳೆ ಗಿಡವನ್ನು ತೆಗೆದು ಶುದ್ಧ ಕುಡಿಯುವ ನೀರು ಒದಗಿಸಲು, ಮೀನುಗಾರರ ಸಮಸ್ಯೆ ದೂರ ಮಾಡಲು ಮುಂದಾಗಬೇಕಿದೆ.
ತಾಲೂಕು ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ತೋಫಿಕ್ ಮಾತನಾಡಿ, ಈ ಹಿಂದೆ ಜಲಾಶಯ ತುಂಬ ಚೆನ್ನಾಗಿತ್ತು. ಚಿಕ್ಕಮಗಳೂರು ದಂಟರಮುಕ್ಕಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಕಳೆ ಗಿಡ ಇಲ್ಲಿನ ಜಲಾಶಯ ಅವರಿಸಿಕೊಂಡಿದೆ. ಇದರಿಂದ ಜಲಾಶದಲ್ಲಿರುವ ನೀರು ವಾಸನೆ ಬರುತ್ತಿದೆ. ಕೂಡಲೇ ಅಧಿಕಾರಿಗಳು ಕಳೆ ಗಿಡ ತೆಗೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಯಗಚಿ ಜಲಾಶಯದಲ್ಲಿ 20 ವರ್ಷದಿಂದ ಮೀನು ಹಿಡಿದು ಜೀವನ ಸಾಗಿಸುತ್ತಿದ್ದೇವೆ. ಜಂಡು ಬೆಳೆದಿರುವುದರಿಂದ ಮೀನು ಹಿಡಿಯಲು ಆಗುತ್ತಿಲ್ಲ. 2 ವರ್ಷದಿಂದ ಇಲಾಖೆ ಅಧಿಕಾರಿಗಳಿಗೆ ಜಂಡು ತೆಗೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿ ಜಂಡು ತೆರವು ಮಾಡಿಸಬೇಕು. ●ಅಬ್ದುಲ್ ಸಮದ್, ನಿರ್ದೇಶಕ, ತಾಲೂಕು ಮೀನುಗಾರರ ಸ್ವಸಹಾಯ ಸಂಘ
ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣಕ್ಕೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪಟ್ಟಣದ ಜನತೆಗೆ, ಪ್ರವಾಸಿಗರು ಜಲಾಶಯದ ನೀರು ಕುಡಿಯುತ್ತಾರೆ. ಜಂಡು ಬೆಳೆದಿರುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಲಾಶಯ ಸ್ವತ್ಛಗೊಳಿಸಿ, ಶುದ್ಧ ಕುಡಿಯುವ ನೀರು ಪೊರೈಸಲು ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ● ನರಸಿಂಹಸ್ವಾಮಿ, ಅಧ್ಯಕ್ಷ, ಶ್ರೀಲಕ್ಷ್ಮೀ ಸಂಗೀತ ಕಲಾ ಸೇವಾ ಟ್ರಸ್ಟ್
ಜಲಾಶಯದಲ್ಲಿ ಕಳೆಗಿಡ ಆವರಿಸಿಕೊಂಡಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅದನ್ನು ತೆರವು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಕುಡಿಯಲು ಇಲ್ಲಿನ ನೀರು ಪೂರೈಕೆ ಆಗುವ ಕಾರಣ ಯಾವುದೇ ರಾಸಾಯನಿಕ ಬಳಕೆ ಮಾಡುವಂತಿಲ್ಲ. ವೈಜ್ಞಾನಿಕವಾಗಿ ಜಲಾಶಯದಿಂದ ಕಳೆ ತೆಗೆಯಲು ಕ್ರಮಕೈಗೊಳ್ಳಲಾಗುತ್ತದೆ. ● ರಾಜೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಯಗಚಿ ಅಣೆಕಟ್ಟು ಉಪವಿಭಾಗ.
ಜಲಾಶಯದಲ್ಲಿ ಕಳೆಗಿಡ ತುಂಬಿರುವುದರಿಂದ ಮೀನುಗಾರರಿಗೆ ತೊಂದರೆಯಾಗಿದೆ. 200 ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಈಗಾಗಲೇ ಜಲಾಶಯಕ್ಕೆ 7 ಲಕ್ಷ ಮೀನುಮರಿ ಬಿಡಲಾಗಿದೆ. ಕಳೆ ತೆಗೆಯದಿದ್ದರೆ ಮೀನುಗಳಿಗೂ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಡ್ಯಾಂ ನಿರ್ವಹಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ●ರವಿಕುಮಾರ್, ಮೀನುಗಾರಿಗೆ ಇಲಾಖೆ ಸಹಾಯಕ ನಿರ್ದೇಶಕ
-ಡಿ.ಬಿ.ಮೋಹನ್ಕುಮಾರ್