Advertisement

ಯಡಮೊಗೆ ಪ್ರಕರಣದ ಆರೋಪಿಗಳಿಗೆ ಕಠಿನ ಶಿಕ್ಷೆಯಾಗಲಿ : ವಿನಯ ಕುಮಾರ್‌ ಸೊರಕೆ

07:06 PM Jun 11, 2021 | Team Udayavani |

ಉಡುಪಿ: ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ ಗಾಣಿಗ ಅವರನ್ನು ಅಲ್ಲಿನ ಗ್ರಾ.ಪಂ. ಅಧ್ಯಕ್ಷ ಹತ್ಯೆ ಮಾಡಿದ್ದಾರೆ. ಇವರು ಬಿಜೆಪಿಯವರು. ಈ ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದು, ಅವರನ್ನು ಪತ್ತೆ ಮಾಡಿ ಕಠಿನ ಶಿಕ್ಷೆ ವಿಧಿಸಿ, ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ತಿಳಿಸಿದರು.

Advertisement

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅವರೇ ಕೊಲೆ ಮಾಡುತ್ತಿದ್ದಾರೆ. ಬಿಜೆಪಿಯ ಪ್ರವೀಣ್‌ ಕುಮಾರ್‌ ಹತ್ಯೆ ಮಾಡಿದ ಎಲ್ಲ ಆರೋಪಿಗಳು ಬಿಜೆಪಿಯ ಪಕ್ಷದ ಕಾರ್ಯಕರ್ತರೇ ಆಗಿದ್ದಾರೆ. ಕೋಟದ ಅವಳಿ ಕೊಲೆಯಲ್ಲಿ ಅಲ್ಲಿನ ಜಿ.ಪಂ. ಸದಸ್ಯ ಪ್ರಥಮ ಆರೋಪಿಯಾಗಿದ್ದಾರೆ. ಯಡಮೊಗೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಉದಯ ಗಾಣಿಗ ಅವರ ಮನೆಗೆ ಭೇಟಿ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ :ಒಪ್ಪಂದದಂತೆ ಬಿ.ಆರ್‌. ಶೆಟ್ಟಿ ಸಂಸ್ಥೆಯೇ ಆಸ್ಪತ್ರೆ ನಡೆಸಬೇಕು: ಶಾಸಕ ಭಟ್‌

ಕೊರೊನಾ ಹತೋಟಿಗೆ ತರುವ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಕೂಗು ಕೇಳುತ್ತಿದ್ದಾರೆ. ಒಂದನೇ ಅಲೆ ಸಂದರ್ಭದಲ್ಲಿ ಪಾಠ ಕಲಿತರೂ, ಎರಡನೇ ಅಲೆ ಎದುರಿಸುವಲ್ಲಿ ವಿಫ‌ಲವಾಗಿದೆ ಎಂದು ಕಿಡಿಕಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next