Advertisement

ಜಿ.ಪಂ. ವಿರೋಧ ಪಕ್ಷದ ನಾಯಕನ ಮೇಲೆ ದುಷ್ಕರ್ಮಿಗಳಿಂದ ಹತ್ಯೆ ಯತ್ನ!

11:29 AM Jun 24, 2020 | sudhir |

ಯಾದಗಿರಿ ; ಹಾಡುಹಗಲೆ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಗರದ ಚಿತ್ತಾಪುರ ರಸ್ತೆಯ ಎಸ್ಪಿ ಕಚೇರಿ ಸಮೀಪ ಬುಧವಾರ ನಡೆದಿದೆ.

Advertisement

ಯಾದಗಿರಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಮರಲಿಂಗಪ್ಪ ಕರ್ನಾಳ್ ಮೇಲೆ ದುಷ್ಕರ್ಮಿಗಳಿಂದ ಹತ್ಯೆ ಯತ್ನ ನಡೆದಿದ್ದು ಗಂಭೀರ ಗಾಯಗೊಂಡ ಅವರನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಬಂದ ಮೂವರು ಅಪರಿಚಿತರು ಮರಲಿಂಗಪ್ಪ ಕರ್ನಾಳ್ ಮೇಲೆ ತಲವಾರು ಹಾಗೂ ಮಚ್ಚಿನಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿದ್ದಾರೆ.

ಮರಲಿಂಗಪ್ಪ ಕರ್ನಾಳ್ ಅವರು ಸುರಪುರ ಬಿಜೆಪಿ ಶಾಸಕ ರಾಜಗೌಡರ ಆಪ್ತರು ಆಗಿದ್ದಾರೆ.

ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ದುಷ್ಕರ್ಮಿಗಳಿಗೆ ಬಲೆ ಬಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next