Advertisement

ಟ್ರೂನ್ಯಾಟ್‌ ಟೆಸ್ಟ್‌ ಲ್ಯಾಬ್‌ ಉದ್ಘಾಟನೆ

06:07 PM May 17, 2020 | Naveen |

ಯಾದಗಿರಿ: ಟ್ರೂನ್ಯಾಟ್‌ ಟೆಸ್ಟ್‌ ಲ್ಯಾಬ್‌ನಲ್ಲಿ ತಪಾಸಣೆ ವೇಳೆ ಲೋಪವಾಗದಂತೆ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೂಚಿಸಿದರು.

Advertisement

ಯಾದಗಿರಿ ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಸ್ಥಾಪಿಸಿರುವ ಕೋವಿಡ್‌-19 ಟೆಸ್ಟ್‌ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್‌ ಟೆಸ್ಟ್‌ ಲ್ಯಾಬ್‌ ಶನಿವಾರ ಉದ್ಘಾಟಿಸಿ ಮಾತನಾಡಿದರು. ನಂತರ ಟ್ರೂನ್ಯಾಟ್‌ ಟೆಸ್ಟ್‌ ಲ್ಯಾಬ್‌ ಪರಿಶೀಲಿಸಿದ ಸಚಿವರು, ಲ್ಯಾಬ್‌ ಕಾರ್ಯ ನಿರ್ವಹಣೆ ಕುರಿತಂತೆ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಶಂಕಿತ ವ್ಯಕ್ತಿಗಳ ಮಾದರಿಗಳನ್ನು ಕೋವಿಡ್‌-19 ಆರ್ಟಿಫಿಸಿಯಲ್‌ ಲ್ಯಾಬ್‌ಗಿಂತ ಮುಂಚೆ ಟ್ರೂನ್ಯಾಟ್‌ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ನೆಗೆಟಿವ್‌ ವರದಿ ಬಂದರೆ ನೆಗೆಟಿವ್‌ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಪಾಸಿಟಿವ್‌ ಬಂದರೆ ಅದನ್ನು ಆರ್ಟಿಫಿಸಿಯಲ್‌ ಲ್ಯಾಬ್‌ಗ ಕಳುಹಿಸಿ ಕೋವಿಡ್‌-19 ಟೆಸ್ಟ್‌ ನಡೆಸಲಾಗುವುದು. ನಂತರ ಬರುವ ವರದಿ ಪರಿಗಣಿಸಲಾಗುವುದು ಎಂದರು. ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್‌. ರೊಟ್ನಡಗಿ, ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next