Advertisement

ಯಾದಗಿರಿಯಲ್ಲಿ ಸೇವಾಲಾಲ್‌ ಜಯಂತಿ ವೇಳೆ ಘರ್ಷಣೆ;ಲಾಠಿ ಚಾರ್ಜ್‌ 

11:16 AM Feb 15, 2018 | Team Udayavani |

ಯಾದಗಿರಿ: ಜಿಲ್ಲೆಯ ಶಾಹಾಪುರದ ಚಮನಾಳ್‌ ಗ್ರಾಮದಲ್ಲಿ  ಸೇವಾಲಾಲ್‌ ಜಯಂತಿ ಆಚರಣೆಯ ವೇಳೆ 2 ಜಾತಿಗಳ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಗುರುವಾರ ಬೆಳಗ್ಗೆ ನಡೆದಿದ್ದು , ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್‌ ನಡೆಸಿದ್ದಾರೆ.

Advertisement

ಬಂಜಾರ ಸಮುದಾಯದವರು ಸೇವಾಲಾಲ್‌ ಮೂರ್ತಿ ಪ್ರತಿಷ್ಠಾಪಿಸಲು ಮುಂದಾದಾಗ ವಾಲ್ಮೀಕಿ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದು ಈ ವೇಳೆ ಘರ್ಷಣೆ ನಡೆದಿದೆ.

ಪರಿಸ್ಥಿತಿ ನಿಯಂತ್ರಣಕ್ಕಾಗಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next