Advertisement

ಸಿಎಂಗೆ ಪತ್ರ ಬರೆದಿಟ್ಟು ಆತ್ಮಹತ್ಯೆ

01:03 AM Jan 19, 2021 | Team Udayavani |

ಗಂಗಾವತಿ: ಅರಣ್ಯ ಇಲಾಖೆಯ ಹಂಗಾಮಿ ನೌಕರ ಟಿ. ಮಲ್ಲಿಕಾರ್ಜುನ (59) ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಪತ್ರ ಬರೆದಿಟ್ಟು ನಗರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಇಲಾಖೆಯ ಕ್ಷೇಮ ನಿಧಿ  ಯೋಜನೆಯಡಿ 34 ವರ್ಷಗಳಿಂದ ಹಂಗಾಮಿ ನೌಕರನಾಗಿದ್ದ ಅವರು, ಮುಂದಿನ ಮೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದರು. ಕ್ಷೇಮನಿಧಿ ಯೋಜನೆಯಡಿ ಎಲ್ಲ ನೌಕರರನ್ನು ಖಾಯಂ ಮಾಡಬೇಕು. ತನ್ನ ಮಗನೊಬ್ಬ ಜೈಲಿನಲ್ಲಿದ್ದು, ಆತನನ್ನು  ಬಿಡುಗಡೆ ಮಾಡಬೇಕು. ಮನೆಯ ದಾಖಲೆಗಳನ್ನಿಟ್ಟು ರಾಮಣ್ಣ ಎಂಬಾತನಿಂದ 20 ಸಾ. ರೂ. ಸಾಲ ಪಡೆದಿದ್ದು, ಅದು ತೀರಿಸಬೇಕು ಮುಂತಾದ ಬೇಡಿಕೆಗಳು ಪತ್ರದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next