Advertisement

ರೈಲ್ವೇ ಇಲಾಖೆಯಿಂದ ಸುಶೀಲ್‌ ಕುಮಾರ್ ಅಮಾನತು?

08:52 AM May 25, 2021 | Team Udayavani |

ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ಸಿಲುಕಿ ಪೊಲೀಸ್‌ ಕಸ್ಟಡಿಯಲ್ಲಿರುವ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರೀಗ ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

Advertisement

ಸುಶೀಲ್‌ ಕುಮಾರ್‌ ಉತ್ತರ ರೈಲ್ವೇಯ ಉದ್ಯೋಗಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಮಂಡಳಿ ರವಿವಾರವೇ ದಿಲ್ಲಿ ಸರಕಾರದಿಂದ ವರದಿಯೊಂದನ್ನು ತರಿಸಿಕೊಂಡಿದೆ.

ಸುಶೀಲ್‌ ವಿರುದ್ಧ ಎಫ್ಐಆರ್‌ ದಾಖಲಾಗಿರುವುದರಿಂದ ಅವರನ್ನು ಕೆಲಸದಿಂದ  ಅಮಾನತುಗೊಳಿಸಬಹುದಾಗಿದೆ ಎಂಬುದಾಗಿ ಉತ್ತರ ರೈಲ್ವೇಯ ಸಿಪಿಆರ್‌ಒ ದೀಪಕ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ:ರಣಜಿ ಟ್ರೋಫಿ ಸಾಧನೆಗೆ ಬೆಲೆಯೇ ಇಲ್ಲದಂತಾಗಿದೆ : ಉನಾದ್ಕತ್‌ ನಿರಾಸೆ

ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಕೆಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ರವಿವಾರ ಬಂಧಿಸಿದ್ದರು. ಅಂದಹಾಗೆ ಸುಶೀಲ್ ಕುಮಾರ್ ಎರಡು ಬಾರಿ ಒಲಿಪಿಂಕ್ ಪದಕ ವಿಜೇತ ಕುಸ್ತಿಪಟು.

Advertisement
Advertisement

Udayavani is now on Telegram. Click here to join our channel and stay updated with the latest news.

Next