Advertisement

ಸರ್ಜಿಕಲ್‌ ಸ್ಟ್ರೈಕ್‌ ಅಗತ್ಯವಿರಲಿಲ್ಲ, ಸಾಧ್ವಿ ಶಾಪ ಕೊಟ್ಟರೆ ಸಾಕಿತ್ತು!

09:09 AM Apr 29, 2019 | Team Udayavani |

ಭೂಪಾಲ್‌ : ಪಾಕ್‌ ಮೂಲದ ಜೈಶ್‌ ಇ ಮೊಹಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ಗೆ ಸಾಧ್ವಿಪ್ರಜ್ಞಾ ಸಿಂಗ್‌ ಶಾಪ ನೀಡಿದರೆ ಸಾಕಿತ್ತು, ಸರ್ಜಿಕಲ್‌ ಸ್ಟ್ರೈಕ್‌ ಮಾಡುವ ಅಗತ್ಯವೇ ಇರಲಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಪ್ರತಿಸ್ಪರ್ಧಿಯನ್ನು ಲೇವಡಿ ಮಾಡಿದ್ದಾರೆ.

Advertisement

ಭೂಪಾಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ಞಾ ಸಿಂಗ್‌ ಹೇಳುತ್ತಾರೆಎಟಿಎಸ್‌ ಮುಖ್ಯಸ್ಥಹೇಮಂತ್‌ ಕರ್ಕರೆನನ್ನ ಶಾಪದಿಂದ ಸತ್ತರು ಎಂದು . ಸರ್ಜಿಕಲ್‌ ಸ್ಟ್ರೈಕ್‌ ಮಾಡುವ ಅಗತ್ಯವೇ ಇರಲಿಲ್ಲ. ಅವರು ಮಸೂದ್‌ ಅಜರ್‌ಗೆ ಶಾಪ ನೀಡಿದರೆ ಸಾಕಿತ್ತು ಎಂದು ಲೇವಡಿ ಮಾಡಿದರು.

ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾಧ್ವಿ ಅವರು ಜಾಮೀನಿನ ಮೇಲೆಬಿಡುಗಡೆಯಾಗಿದ್ದಾರೆ. ಹೇಮಂತ್‌ ಕರ್ಕರೆ ನನ್ನ ಶಾಪದಿಂದಾಗಿ ಸಾವನ್ನಪ್ಪಿದ್ದರು ಎಂದು ಸಾಧ್ವಿ ಹೇಳಿಕೆ ನೀಡಿದ್ದರು.

ಭೂಪಾಲ್‌ ಕ್ಷೇತ್ರ ದಲ್ಲಿ ಜಿದ್ದಾ ಜಿದ್ದಿನ ಕದನ ಏರ್ಪಟ್ಟಿದ್ದು ಇಡೀ ದೇಶದ ಗಮನ ಸೇಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next