Advertisement

ಭಗವದ್ಗೀತೆಯಿಂದ ಪ್ರೇರಿತರಾದ ಕಂಚು ಗೆದ್ದ ಶರದ್‌ ಕುಮಾರ್‌

09:07 PM Sep 02, 2021 | Team Udayavani |

ಟೋಕ್ಯೊ: ಆ.31ರಂದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಶರದ್‌ ಕುಮಾರ್‌ ಕಂಚಿನ ಪದಕ ಗೆದ್ದಿದ್ದರು. ಅದರ ಹಿಂದಿನ ರಾತ್ರಿಯಿಡೀ ಅವರು ಅತ್ತಿದ್ದರು.

Advertisement

ಮಂಡಿಯಲ್ಲಿ ಮೂಳೆಯೊಂದು ಸ್ವಲ್ಪ ವ್ಯತ್ಯಾಸವಾದ ಪರಿಣಾಮ ಮರುದಿನ ಸ್ಪರ್ಧಿಸಲು ಆಗುವುದಿಲ್ಲವಲ್ಲ, ಇಷ್ಟು ದಿನದ ಪರಿಶ್ರಮ ವ್ಯರ್ಥವಾಗುತ್ತಲ್ಲ ಎಂದು ಅವರು ಕಂಗಾಲಾಗಿದ್ದರು. ಆ ಹೊತ್ತಿನಲ್ಲಿ ಭಗವದ್ಗೀತೆಯ ಸಾಲುಗಳು ಅವರ ನೆರವಿಗೆ ಬಂದಿವೆ.

ಅವರ ತಂದೆ ಫೋನಿನಲ್ಲಿ ಓದಿ ಹೇಳಿದ ಗೀತೆಯ ಸಾಲಿನಿಂದ ಪ್ರೇರಿತರಾದ ಅವರು ಸ್ಪರ್ಧಿಸುವ ನಿರ್ಧಾರ ಮಾಡಿ ಕಡೆಗೆ ಕಂಚನ್ನೇ ಗೆದ್ದರು! ಪ್ರಯತ್ನ ಮಾಡುವುದಷ್ಟೇ ನಮ್ಮ ಜವಾಬ್ದಾರಿ. ಯಾವುದು ನಮ್ಮ ನಿಯಂತ್ರಣದಲ್ಲಿದೆಯೋ ಅದನ್ನು ಚೆನ್ನಾಗಿ ಮಾಡಬೇಕು, ನಮ್ಮ ನಿಯಂತ್ರಣದಲ್ಲಿಲ್ಲದ ಸಂಗತಿಗಳ ಬಗ್ಗೆ ಕೊರಗುವ ಅಗತ್ಯವಿಲ್ಲ… ಈ ಅರ್ಥ ಬರುವ ಗೀತೆಯ ಸಾಲುಗಳನ್ನು ತಂದೆ ಓದಿದ್ದರು. ಭಗವದ್ಗೀತೆಯ ಕರ್ಮಣ್ಯೇವಾಧಿಕಾರಸ್ತೇ ಮಾ ಫ‌ಲೇಷು ಕದಾಚನ ಇದೇ ಅರ್ಥವನ್ನು ಹೇಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next