Advertisement

ಉಗ್ರರು ಉ.ಪ್ರ.ಕ್ಕೆ ಕಾಲಿಟ್ಟಿದ್ದರೆ ಕೊಂದು ಬಿಡುತ್ತಿದ್ದೆವು: ಯೋಗಿ

06:45 AM Jan 25, 2019 | Team Udayavani |

ಮುಂಬಯಿ : ಪ್ರಯಾಗ್‌ರಾಜ್‌ ನಲ್ಲೀಗ ನಡೆಯುತ್ತಿರುವ  ಕುಂಭಮೇಳದಲ್ಲಿ ರಾಸಾಯನಿಕ ದಾಳಿ ನಡೆಸುವ ಮೂಲಕ ಸಹಸ್ರಾರು ಅಮಾಯಕರನ್ನು ಕೊಲ್ಲುವ ಸಂಚು ನಡೆಸಿ ಮಹಾರಾಷ್ಟ್ರ ಎಟಿಎಸ್‌ ನಿಂದ ಬಂಧಿತರಾಗಿರುವ ‘ಐಸಿಸ್‌ ನಂಟಿನ 9 ಶಂಕಿತ ಉಗ್ರರು ಒಂದೊಮ್ಮೆ ಉತ್ತರ ಪ್ರದೇಶವನ್ನು ಪ್ರವೇಶಿಸಿದ್ದರೆ ಅವರನ್ನು ನಾವು ಕೊಂದು ಮುಗಿಸುತ್ತಿದ್ದೆವು’ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 

Advertisement

ಸಮೂಹ ನಾಶದ ರಾಸಾಯನಿಕ ದಾಳಿ ಮಾಡುವ ಸಂಚು ಹೊಂದಿದ್ದ  ಐಸಿಸ್‌ ನಂಟಿನ 9 ಶಂಕಿತರನ್ನು ಬಂಧಿಸಿರುವ ಮಹಾರಾಷ್ಟ್ರ  ಎಟಿಎಸ್‌ ಮತ್ತು ಸರಕಾರವನ್ನು ಸಿಎಂ ಯೋಗಿ ಅಭಿನಂದಿಸಿದರು. 

ಮುಂಬಯಿಯಲ್ಲಿ ನಡೆದಿದ್ದ ಉ.ಪ್ರ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಯೋಗಿ ಅವರು “ಉಗ್ರರ ಮೂಲೋತ್ಪಾಟನೆಯೇ ನನ್ನ ಸರಕಾರದ ಗುರಿ; ಅದರಲ್ಲಿ ಯಾವುದೇ ರಾಜಿ ಇಲ್ಲ. ಉಗ್ರ ನಿಗ್ರಹವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು. 

ಸ್ಥಳೀಯ ಬಿಜೆಪಿ ನಾಯಕರೋರ್ವರು ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌, ಉ.ಪ್ರ. ರಾಜ್ಯಪಾಲ ರಾಮ ನಾಯಕ್‌ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next