Advertisement

ಯುಎಇಯಲ್ಲಿ ವಿಶ್ವ  ತುಳು ಸಮ್ಮೇಳನ: ಪೂರ್ವಭಾವಿ ಸಭೆ

05:00 PM Jul 03, 2018 | |

ಮುಂಬಯಿ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ ದುಬೈ -2018 ಸಮಾರಂಭವು ನ. 23 ಮತ್ತು ನ. 24 ರಂದು  ದುಬೈಯ ಅಲ್‌ ನಾಸರ್‌ ಲೀಸರ್‌ ಲ್ಯಾಂಡ್‌ ಐಸ್‌ ರಿಂಕ್‌ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಇದರ ಸಲಹಾ ಸಮಿತಿಯ ಪೂರ್ವಭಾವಿ ಸಭೆಯು ಜೂ. 29 ರಂದು  ದುಬೈಯ ಬುರ್ಜು ಖಲಿಫಾ ರೆಸಿಡೆನ್ಸಿಸ್‌ ಮಲ್ಟಿಫಂಕ್ಷನ್‌ ಹಾಲ್‌ನಲ್ಲಿ ಸಂಘಟಕ   ಸರ್ವೋತ್ತಮ  ಶೆಟ್ಟಿಯವರ  ಅಧ್ಯಕ್ಷತೆ ಯಲ್ಲಿ  ನಡೆಯಿತು.

Advertisement

ಬಿ. ಕೆ. ಗಣೇಶ್‌  ರೈ, ಶೋಧನ್‌ ಪ್ರಸಾದ್‌, ದೇವ್‌ ಕುಮಾರ್‌ ಕಾಂಬ್ಳಿ, ಆಲ್ವಿನ್‌ ಪಿಂಟೊ, ಅಜ್ಮಲ್‌, ಸತೀಶ್‌ ಪೂಜಾರಿ, ಯೋಗೇಶ್‌ ಪ್ರಭು ಮತ್ತು ಸುವರ್ಣ ಸತೀಶ್‌, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ, ಶಶಿ ರವಿರಾಜ್‌ ಶೆಟ್ಟಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. 

ಕೊಲ್ಲಿ ತುಳುವರು, ಅಖೀಲ ಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಾಗರೋತ್ತರ ತುಳುವರು ಇವರ ಸಹಯೋಗ ದೊಂದಿಗೆ ಆಯೋಜಿಸಲಾಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪರಮ ಪೂಜ್ಯ ಪದ್ಮವಿಭೂಷಣ ಪುರಸ್ಕೃತ  ಡಾ| ಡಿ. ವೀರೆಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ.  

ಸಮ್ಮೇಳನದ ಅಧ್ಯಕ್ಷರಾಗಿ  ಅಬುಧಾಬಿ  ಎನ್‌.  ಎಂ.  ಸಿ.  ಸಮೂಹ  ಸಂಸ್ಥೆಯ  ಸ್ಥಾಪಕರು  ಮತ್ತು ಕಾರ್ಯಾಧ್ಯಕ್ಷ ಪದ್ಮಶ್ರೀ ಪುರಸ್ಕೃತ ಡಾ|  ಬಿ. ಆರ್‌. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಮಂಗಳೂರು ಧರ್ಮ ಪ್ರಾಂತ್ಯದ ವಂದನೀಯ ಧರ್ಮಧ್ಯಾಕ್ಷರು ಮತ್ತು ಮುಸ್ಲಿಂ ಪ್ರವಚನಕಾರರು ಮತ್ತು ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯಾಥಿ-ಗಣ್ಯರು ಆಗಮಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

ತುಳು ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು ಗಲ್ಫ್ ರಾಷ್ಟ್ರಗಳಾದ  ಮಸ್ಕತ್‌, ಬಹರೇನ್‌, ಕತ್ತಾರ್‌, ಕುವೇಟ್‌, ಸೌದಿ ಅರೇಬಿಯಾ, ಒಮಾನ್‌ ಮತ್ತು ಯು.ಎ.ಇ.ಯ ಹಲವು ಜಾನಪದ ನƒತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಐತಿಹಾಸಿಕ ದಾಖಲೆಯಾಗಲಿರುವ ವಿಶ್ವ ತುಳು ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ ಇನ್ನಿತರ ಕಾರ್ಯಕ್ರಮಗಳು ಜರಗಲಿವೆ.

Advertisement

ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ ತುಳು ಸಾಹಿತ್ಯ ಗೋಷ್ಠಿ – ತುಳು ಕೋಡೆ – ಇನಿ – ಎಲ್ಲೆ. ದೈವಾರಾಧನೆ ಮತ್ತು ಭೂತಾರಾಧನೆ, ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು  ಚುಟುಕು  ಗೋಷ್ಠಿ,  ತುಳು  ರಂಗ  ಭೂಮಿ  ಮತ್ತು  ಚಲನಚಿತ್ರ  ಗೋಷ್ಠಿ  ಮತ್ತು  ಅನಿವಾಸಿ  ಗೋಷ್ಠಿಗಳಲ್ಲಿ ತುಳುನಾಡಿನಿಂದ ಹಲವಾರು ಸಾಹಿತಿಗಳು  ಮತ್ತು ವಿದ್ವಾಂಸರು, ಕಲಾವಿದರು ಭಾಗವಹಿಸಲಿದ್ದಾರೆ.

ವಿಶ್ವ  ತುಳು  ಸಮ್ಮೇಳನದ  ಯಶಸ್ಸಿಗೆ  ಸರ್ವರ  ಸಹಕಾರ  ಬೆಂಬಲವನ್ನು    ಕೋರಿ  ಮುಂಬರುವ  ದಿನಗಳಲ್ಲಿ  ಹೆಚ್ಚಿನ ಮಾಹಿತಿಯೋಂದಿಗೆ  ಯು. ಎ. ಇ. ಯಲ್ಲಿರುವ  ಎಲ್ಲಾ  ಕರ್ನಾಟಕ ಪರ ಸಂಘಟನೆಗಳನ್ನು  ಮತ್ತು  ಭಾರತದಲ್ಲಿ  ಹಾಗೂ ವಿದೇಶಗಳಲ್ಲಿರುವ ತುಳು ಭಾಷಾ ಸಂಘ ಸಂಸ್ಥೆಗಳನ್ನು ಶೀಘ್ರದಲ್ಲಿ ಸಂಪರ್ಕಿಸಲಾಗುವುದು ಎಂದು ಸರ್ವೋತ್ತಮ ಶೆಟ್ಟಿr ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next