Advertisement

ವಿಶ್ವ ತಂಬಾಕು ರಹಿತ ದಿನಾಚರಣೆ: “ರಾಜ್ಯಾದ್ಯಂತ ಕೋಟ್ಪಾ ಕಾಯ್ದೆ ತೀವ್ರಗೊಳಿಸಿ’

12:24 AM Jun 01, 2022 | Team Udayavani |

ಬೆಂಗಳೂರು: ತಂಬಾಕು ನಿಯಂತ್ರಣಕ್ಕೆ ಜಾರಿಗೆ ತರಲಾದ ಕೋಟ್ಪಾಕಾಯ್ದೆಯನ್ನು ರಾಜ್ಯಾದ್ಯಂತ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ, ಸಾರ್ವಜನಿಕವಾಗಿ ಧೂಮಪಾನ ಮಾಡುವವರ ವಿರುದ್ಧ ಕಠಿನ ಕೈಗೊಳ್ಳುವಂತಾಗಬೇಕು ಎಂದು ಕ್ಯಾನ್ಸರ್‌ ತಜ್ಞ ಮತ್ತು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ಡಾ| ರಮೇಶ್‌ ಬಿಳಿಮಗ್ಗ ಸರಕಾರವನ್ನು ಒತ್ತಾಯಿಸಿದರು.

Advertisement

ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ನಿಮ್ಹಾನ್ಸ್‌ ಕನ್ವೆನನ್‌ ಸೆಂಟರ್‌ನಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಧೂಮಪಾನದ ವಿರುದ್ಧ ಜನಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಪ್ರಾಪ್ತ ವಯಸ್ಕರಿಗೆ ಸಿಗರೇಟ್‌ ಅಥವಾ ಇತರ ಉತ್ಪನ್ನಗಳ ಮಾರಾಟ, ಶಿಕ್ಷಣ ಸಂಸ್ಥೆಯ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕಿನ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ನಿಷೇಧವಿದ್ದರೂ ನಿಯಮ ಉಲ್ಲಂಘಿ ಸಲಾಗುತ್ತಿದೆ. ಈ ಉಲ್ಲಂಘನೆಗಳಿಗೆ ಪ್ರಸ್ತುತ ಕೋಟ್ಪಾ ಅಡಿ ವಿಧಿಸಲಾಗುತ್ತಿರುವ ದಂಡಗಳು ತೀರಾ ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ವಿಧಿಸುತ್ತಿರುವ ದಂಡವನ್ನು ಏರಿಸುವಂತೆ ಒತ್ತಾಯಿಸಿದರು.

ನಮ್ಮೆಲ್ಲರ ಹೊಣೆ
ಸಂಸದ ಪಿಸಿ ಮೋಹನ್‌ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ನಮ್ಮ ಯುವ ಜನಾಂಗವನ್ನು ತಂಬಾಕಿನಿಂದ ದೂರವಿರಿಸಿ. ಪರೋಕ್ಷ ಧೂಮಪಾನವನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಸಮಾಜದ ಹಿತದೃಷ್ಠಿಯಿಂದ ನಾವು ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಒಬ್ಬ ಸಂಸದನಾಗಿ ನಾನು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next