Advertisement

ಜಿಲ್ಲೆ ರಂಗಭೂಮಿಯ ತವರು ಮನೆ

12:39 PM Mar 29, 2021 | Team Udayavani |

ಚಾಮರಾಜನಗರ: ಜಿಲ್ಲೆಯು ರಂಗಭೂಮಿಯ ತವರು ಮನೆ ಆಗಿದ್ದು,ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಡಾ.ರಾಜಕುಮಾರ್‌ರಂತಹ ಮಹಾನ್‌ನಟರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆಎಂದು ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಹೆಮ್ಮೆ ವ್ಯಕ್ತಪಡಿಸಿದರು.

Advertisement

ನಗರದ ರೋಟರಿ ಭವನದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗವಾಹಿನಿ, ಚೇತನಕಲಾವಾಹಿನಿ, ಜಿಲ್ಲಾ ರಂಗಭೂಮಿಕಲಾವಿದರ ಸಂಘ, ಉಮ್ಮತ್ತೂರು ಗೆಳೆಯರಬಳಗದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಂಗಸಂಗೀತೋತ್ಸವ ಹಾಗೂ ರಂಗ ದೃಶ್ಯಾವಳಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ನಾಡಿನ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದ್ದು,ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದುವ ಮಾಧ್ಯಮವಾಗಿದೆ. ನಾಟಕಗಳಿಂದ ಉತ್ತಮ ಅಭಿರುಚಿಯನ್ನು ಬೆಳೆಸಬಹುದು. ಜೀವನ ಮೌಲ್ಯಗಳನ್ನುವೃದ್ಧಿಸಿಕೊಳ್ಳಬಹುದು. ಇಂಥರಂಗಭೂಮಿಗೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕೊಡುಗೆಯಾಗಿ ನೀಡಿದ ಹೆಮ್ಮೆ ನಮ್ಮಚಾಮರಾಜನಗರ ಜಿಲ್ಲೆಯದ್ದಾಗಿದೆ. ರಂಗಭೂಮಿಯಿಂದ ಬಂದ ಪ್ರತಿಭೆ ರಾಜ್‌ಕುಮಾರ್‌ ಅವರು ಇಡೀ ದೇಶವೇಮೆಚ್ಚುವಂಥ ನಟರಾಗಿ ಬೆಳೆದರು ಎಂದು ಶ್ಲಾಘಿಸಿದರು.

ಕಾಮಗಾರಿ ವಿಳಂಬಕ್ಕೆ ಬೇಸರ: ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರ ಕಲಾಪ್ರದರ್ಶನಕ್ಕೆ ರಂಗಮಂದಿರ ನಿರ್ಮಾಣ ಕಾರ್ಯವು ವಿಳಂಬವಾಗಿ ನಡೆಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಮಹೇಶ್‌, ಜಿಲ್ಲಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆದಷ್ಟು ಬೇಗ ರಂಗಮಂದಿರನಿರ್ಮಾಣ ಕಾಮಗಾರಿಯನ್ನು ಮುಗಿಸಿಕಲಾವಿದರ ಕಲಾ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು.

ಕಲಾವಿದರಿಗೆ ನೆರವು ನೀಡಲಿ: ರಂಗಭೂಮಿಯ ವೇದಿಕೆಯ ಮೇಲೆರಾಜನಾಗಿದ್ದ ಕಲಾವಿದರು, ನಿಜಜೀವನದಲ್ಲಿ ಕಡುಬಡತನದಲ್ಲಿ ಜೀವನಸಾಗಿಸುತ್ತಿರುತ್ತಾರೆ. ಅವರ ಕೊನೆಗಾಲದಲ್ಲಿಆರೋಗ್ಯ ಹದಗೆಟ್ಟು ತುಂಬಾ ಕಷ rಅನುಭವಿಸುತ್ತಾರೆ. ಇಂತಹ ಕಲಾವಿದರಿಗೆಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದು ಹೇಳಿದರು.

Advertisement

ಸುಭದ್ರಮ್ಮ ಮನ್ಸೂರ್‌ ರಂಗ ಪ್ರಶಸ್ತಿ: ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಬ್ರಿಟನ್‌ ರಂಗನಿರ್ದೇಶಕಿ ಹೆಲೆನ್‌ ಮಿರೇನ್‌ ಅವರು ರವಾನಿಸಿದ್ದ ರಂಗ ಸಂದೇಶವನ್ನುಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರು ಓದಿದರು. ನಾಟಕಶಿಕ್ಷಕಿಯಾಗಿ ರಂಗ ನಿರ್ದೇಶಕಿಯಾಗಿ, ನಟಿಯಾಗಿ ಸಾಧನೆಗೈದ ಚಿತ್ರಾವೆಂಕಟರಾಜುಗೆ ನಾಡೋಜ ಸುಭದ್ರಮ್ಮ ಮನ್ಸೂರ್‌ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಂಗ ವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ,ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಅಧ್ಯಕ್ಷ ಘಟಂ ಕೃಷ್ಣ, ರೋಟರಿ ಸಂಸ್ಥೆ ಅಧ್ಯಕ್ಷಪ್ರಕಾಶ್‌, ಜಿಪಂ ಸದಸ್ಯ ಬಾಲರಾಜ್‌ ಭಾಗವಹಿಸಿದ್ದರು. ರಾಜ್ಯ ದಲಿತ ಮಹಾಸಭಾ ಅಧ್ಯಕ್ಷ ವೆಂಕಟರಮಣಸ್ವಾಮಿ ( ಪಾಪು) ಅಧ್ಯಕ್ಷತೆ ವಹಿಸಿದ್ದರು.

ಸಂತೆಮರಹಳ್ಳಿ ಎಂಪಿ ರಾಜು, ಬಿಎಂ ಮಹದೇವಯ್ಯ ಆರ್‌.ಎಂ. ನಾಗರಾಜು,ಅರುಣ್‌ಕುಮಾರ್‌ ಮಾಂಬಳ್ಳಿ, ವಿಮಹದೇವಯ್ಯ( ಆಪು), ಬಾಗಳಿರಾಜಶೇಖರ್‌, ಉಮ್ಮತ್ತೂರು ಬಸವಣ್ಣ,

ಎಂ. ಎನ್‌.ಮಹಾದೇವ, ಶಿವನಂಜಯ್ಯರಾಮಸಮುದ್ರ, ಕಿರಣಗಿರ್ಗಿ ಭಾಗವಹಿಸಿದ್ದರು. ರಂಗ ದೃಶ್ಯಾವಳಿಯಲ್ಲಿ ಉಮ್ಮತ್ತೂರು ಬಸವರಾಜು ದಕ್ಷ ನಾಗಿ, ಈಶ್ವರನಾಗಿ ಸೂರ್ಯಮೂರ್ತಿ, ನಾರದನಾಗಿ ವೆಂಕಟರಮಣಸ್ವಾಮಿ, ಭೃಗುವಾಗಿ ಹಳ್ಳಿಕೆರೆಹುಂಡಿ ಗುರು ಜಾಲ ಬ್ರಹ್ಮನಾಗಿಪಿ.ಲಿಂಗಯ್ಯ, ಸತಿ ಪಾತ್ರದಲ್ಲಿ ಮಂಡ್ಯದಪವಿತ್ರ ಅವರು ಮನೋಜ್ಞ ಅಭಿನಯ ನೀಡಿ ಕಲಾಭಿಮಾನಿಗಳ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next