Advertisement

“ಪಾಕ್‌ನಂಥ ದೇಶಗಳಿಂದ ವಿಶ್ವಶಾಂತಿ ಸಾಧ್ಯವಿಲ್ಲ’

01:17 AM Sep 12, 2020 | mahesh |

ವಿಶ್ವಸಂಸ್ಥೆ: “ಪಾಕಿಸ್ಥಾನದಲ್ಲಿ ಹಿಂಸಾಚಾರದ ಸಂಸ್ಕೃತಿ ಇನ್ನೂ ಮುಂದುವರಿದಿದೆ. ಧಾರ್ಮಿಕ ಅಲ್ಪಸಂಖ್ಯಾಕರ ಮೇಲಿನ ದೌರ್ಜನ್ಯಗಳಂಥ ಘಟನೆ ಅಲ್ಲಿ ಪದೇ ಪದೆ ಜರಗುತ್ತಿವೆ. ಆ ದೇಶದಲ್ಲಿ ಮಾನವ ಹಕ್ಕುಗಳು ಪಾಲನೆ ಶೋಚನೀಯ ಸ್ಥಿತಿಯಲ್ಲಿದೆ. ಇಂಥ ದೇಶಗಳ ಸ್ಥಿತಿಯಿಂದ ವಿಶ್ವಶಾಂತಿಯನ್ನು ಸಾಧಿಸುವುದಾದರೂ ಹೇಗೆ?’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಪೌಲೋಮಿ ತ್ರಿಪಾಠಿ ಕಿಡಿಕಾರಿದ್ದಾರೆ.

Advertisement

ಗುರುವಾರ, “ಶಾಂತಿಯ ಸಂಸ್ಕೃತಿ’ ಎಂಬ ವಿಷಯದ ಆಧಾರದಲ್ಲಿ ವಿಶ್ವಸಂಸ್ಥೆಯ 74ನೇ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ಥಾನದ ರಾಯಭಾರಿ ಮುನೀರ್‌ ಅಕ್ರಮ್‌, ಭಾರತದಂಥ ರಾಷ್ಟ್ರ ಬಾಬ್ರಿ ಮಸೀದಿಯನ್ನು ಕೆಡವಿ ಅಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇಂಥ ಸನ್ನಿವೇಶಗಳಿಂದ ಶಾಂತಿ ನಿರೀಕ್ಷಿಸಲು ಸಾಧ್ಯವೇ” ಎಂದು ಟೀಕಿಸಿದರು.

ಇದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿದ ತ್ರಿಪಾಠಿ ಮೇಲಿನಂತೆ ಗುಡುಗಿದರು. ಅಲ್ಲದೆ, “”ಉಗ್ರವಾದದಿಂದಾಗಿ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ, ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಉಗ್ರವಾದ ಪಿಡುಗನ್ನು ನಿವಾರಿಸಲು ಇಚ್ಛಾಶಕ್ತಿಯನ್ನು ರೂಪಿಸಬೇಕು” ಎಂದು ಅವರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next