Advertisement

ಜೀವ ವೈವಿಧ್ಯ ರಕ್ಷಣೆ ಮುಖ್ಯ: ಮಂಜಪ್ಪ

06:59 AM Jun 06, 2020 | Suhan S |

ಸಾಗರ: ಸೂರ್ಯನ ಬೆಳಕು, ಆಮ್ಲಜನಕ, ಮತ್ತು ನೀರು ಮನುಷ್ಯನಿಗೆ ಮುಖ್ಯವಾಗಿರುವಷ್ಟೇ ಭೂಮಂಡಲದ ಇತರ ಜೀವಿಗಳಿಗೂ ಅಗತ್ಯ. ಜೀವ ವೈವಿಧ್ಯ ರಕ್ಷಣೆಯಿಂದ ಪ್ರತ್ಯಕ್ಷ, ಪರೋಕ್ಷವಾಗಿ ನಮ್ಮ ಉಳಿವು ಸಾಧ್ಯವಾಗಿದೆ ಎಂಬುದು ಹಲವು ಬಾರಿ ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಸಹಜ ರೀತಿಯಲ್ಲಿ ರಕ್ಷಣೆ ಮಾಡಲೇಬೇಕು ಎಂದು ಕಲ್ಮನೆ ಗ್ರಾಪಂ ಅಧ್ಯಕ್ಷ ಎನ್‌.ಟಿ. ಮಂಜಪ್ಪ ತಿಳಿಸಿದರು.

Advertisement

ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ, ಚಿಪ್ಪಳಿ ಲಿಂಗದಹಳ್ಳಿ ಆಯುರ್ವೇದ ವನ ಸಮಿತಿ, ಸಾಗರದ ಸ್ವಾನ್‌ ಮತ್ತು ಮ್ಯಾನ್‌ ಮೊದಲಾದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಚಿಪ್ಪಳಿ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆಯ ಭಾಗವಾಗಿ ಸಸಿ ನೆಟ್ಟು ಮಾತನಾಡಿದ ಅವರು, ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷ ವಾಕ್ಯವೇ ಜೀವಿ ವೈವಿಧ್ಯ ಉಳಿಸಿ. ಆ ಮಾತನ್ನು ಸಾರ್ಥಕಗೊಳಿಸಬೇಕಾಗಿದೆ ಎಂದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ನೂತನ್‌ ಮಾತನಾಡಿ, ನೆಟ್ಟ ಗಿಡಗಳನ್ನು ಮುಂದಿನ ಎರಡು ವರ್ಷಗಳ ಕಾಲ ಜತನವಾಗಿ ನೋಡಿಕೊಳ್ಳುವ ಕೆಲಸ ಆಗಬೇಕು ಎಂದರು.

ಸೀತಾರಾಮ ಕುಂಟಗೋಡು, ನಿವೃತ್ತ ಉಪವಲಯ ಅರಣ್ಯಾಧಿಕಾರಿ ಪುರುಷೋತ್ತಮ್‌, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಜಾನನ, ಮುಖ್ಯ ಶಿಕ್ಷಕಿ ಸವಿತಾ ಭಟ್‌ ಇದ್ದರು. ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಅಖೀಲೇಶ್‌ ಚಿಪ್ಪಳಿ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next