Advertisement

ನಗದು ಬಹುಮಾನ ನಿರಾಕರಿಸಿದ ವಿಶ್ವಕಪ್‌ ವಿಜೇತ ಅಂಧ ಕ್ರಿಕೆಟಿಗರು

11:29 AM Feb 22, 2017 | Team Udayavani |

ನವದೆಹಲಿ: ಇತ್ತೀಚೆಗೆ ಟಿ20 ವಿಶ್ವಕಪ್‌ ಗೆದ್ದ ಭಾರತ ಅಂಧರ ಕ್ರಿಕೆಟ್‌ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯೆಲ್‌ ಒಟ್ಟು 10 ಲಕ್ಷ ರೂ. ನಗದು ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಭಾರತ ಅಂಧರ ಕ್ರಿಕೆಟ್‌ ಮಂಡಳಿ (ಸಿಎಬಿಐ). ಈ ಪ್ರಶಸ್ತಿ ಮೊತ್ತವನ್ನು ತಿರಸ್ಕರಿಸಿದೆ.

Advertisement

ಏಕದಿನ ವಿಶ್ವಕಪ್‌ ಗೆದ್ದಾಗ ಎಲ್ಲ ಆಟಗಾರರಿಗೂ ತಲಾ 5 ಲಕ್ಷ ನೀಡಲಾಗಿತ್ತು. ಈ ಬಾರಿ ಚುಟುಕು ವಿಶ್ವಕಪ್‌ ಗೆದ್ದರೂ ನಮಗೆ ಸೂಕ್ತ ನಗದು ಪ್ರಕಟಿಸಿಲ್ಲ. ಇದರಿಂದ ನಮಗೆ ತೀವ್ರ ನಿರಾಶೆಯಾಗಿದೆ. ಹೀಗಾಗಿ ನಗದು ಪುರಸ್ಕಾರ ಸ್ವೀಕರಿಸದಿರಲು ನಿರ್ಧರಿಸಿದ್ದೇವೆ ಎಂದು ಸಿಎಬಿಐ ಮುಖ್ಯಸ್ಥ ಜಿ.ಕೆ. ಮಹಾಂತೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next