Advertisement

World Cup 2023: ಪಾಕ್ ವಿರುದ್ಧ ಭಾರತ ಗೆಲ್ಲಲೆಂದು ಕ್ರಿಕೆಟ್ ಪ್ರೇಮಿಗಳಿಂದ ವಿಶೇಷ ಪೂಜೆ

01:06 PM Oct 14, 2023 | Team Udayavani |

ಮೈಸೂರು/ರಾಮನಗರ: ಇಂದು ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ವಿಶ್ವ ಕಪ್ ಪಂದ್ಯಾಟಕ್ಕೆ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದ್ದು ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳು ಭಾರತ ಗೆಲ್ಲಲ್ಲಿ ಎಂದು ಹಾರೈಸಿದ್ದಾರೆ.

Advertisement

ಅಷ್ಟು ಮಾತ್ರವಲ್ಲದೆ ಮೈಸೂರು ಹಾಗೂ ರಾಮನಗರದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶ್ವ ಕಪ್ ಪಂದ್ಯಾವಳಿಯಲ್ಲಿ ಪಾಕ್ ವಿರುದ್ಧ ಭಾರತ ಗೆಲ್ಲಲೆಂದು ದೇವಸ್ಥಾನಗಲ್ಲಿ ಕ್ರಿಕೆಟ್ ಆಟಗಾರರ ಹೆಸರಿನಲ್ಲಿ ವಿಶೇಷ ಪೂಜೆಯನ್ನು ನಡೆಸುತ್ತಿದ್ದಾರೆ.

ಅದರಂತೆ ಮೈಸೂರಿನಲ್ಲಿರುವ ಕ್ರಿಕೆಟ್ ಪ್ರೇಮಿಗಳಿಂದ ಇಲ್ಲಿನ 101 ಗಣಪತಿ ದೇವಸ್ಥಾನದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದು ಬರಲಿ ಎಂದು ಭಾರತದ ಆಟಗಾರರ ಹೆಸರಿನಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿ ತ್ರಿವಣ ಧ್ವಜ ಹಿಡಿದು ಭಾರತದ ತಂಡಕ್ಕೆ ಶುಭವಾಗಲಿ ಎಂದು ಜೈಕಾರ ಕೂಗಿ ಶುಭ ಹಾರೈಸಿದರು, ಹಿಂದೆ ಪಾಕಿಸ್ತಾನ ವಿರುದ್ಧ ಸರಣಿ ಜಯಗಳಿಸಿದ್ದು ಇಂದು ನಡೆಯುವ ಪಂದ್ಯಾವಳಿಯಲ್ಲಿ ಸಹ ಭಾರತದ ತಂಡ ವಿಜಯಶಾಲಿಯಾಗಲಿದೆ ಭಾರತದ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ವಿಶ್ವಾಸವಿದೆ ಎಂದು ಕ್ರಿಕೆಟ್ ಪ್ರೇಮಿ ಲೋಹಿತ್ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಿವರಾಜ್, ನವೀನ್ ಬಲರಾಮ್, ನಾಗರಾಜ್, ಮಂಜುನಾಥ್ ಮನೋಹರ್, ಕಿರಣ್ ವಿಷ್ಣು ರಘು ಹಾಗೂ ಇನ್ನಿತರ ಕ್ರಿಕೆಟ್ ಪ್ರೇಮಿಗಳು ಹಾಜರಿದ್ದರು

ರಾಮನಗರ: ವಿಶ್ವ ಕಪ್ ಪಂದ್ಯವಳಿಯಲ್ಲಿ ಭಾರತಕ್ಕೆ ಜಯ ಸಿಗಲಿ ಎಂದು ರಾಮನಗರ ಅಗ್ರಹಾರ ಆಂಜನೇಯಸ್ವಾಮಿಗೆ ಎಂ‌ಜಿ ಎಸ್ತೆ ಗೆಳೆಯರ ಬಳಗದಿಂದ ವಿಶೇಷ ಪೂಜೆ ಸಲ್ಲಿಸಿದ‌ರು. ಪಾಕ್ ವಿರುದ್ಧ ಭಾರತ ಗೆಲ್ಲಲಿ ಎಂದು ತ್ರಿವರ್ಣ ಧ್ವಜ ಹಿಡಿದು ಶುಭಕೋರಿದ ಕ್ರಿಕೆಟ್ ಅಭಿಮಾನಿಗಳು.
ಪಾಕ್ ಸೋಲಲಿ, ಭಾರತ ಗೆಲ್ಲಲಿ ಎಂದು ಮುಸ್ಲಿಂ ಬಾಂದವರಿಂದ ಘೋಷಣೆ ಕೂಗಿದರು.

Advertisement

ಇದನ್ನೂ ಓದಿ: Fraud: ಪಾರ್ಟ್‌ ಟೈಂ ಉದ್ಯೋಗ ಕೊಡಿಸುವುದಾಗಿ 58.83 ಲಕ ರೂ. ವಂಚಿಸಿದ ಸೈಬರ್‌ ಕಳ್ಳರು

Advertisement

Udayavani is now on Telegram. Click here to join our channel and stay updated with the latest news.

Next