Advertisement

ಉಡುಪಿಯಲ್ಲಿ  ವಿಶ್ವ ಬಂಟರ ಸಮ್ಮಿಲನ-2018: ಸಭೆ

12:23 PM Jun 29, 2018 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿಯಲ್ಲಿ ಸೆ. 9ರಂದು ಜರಗಲಿರುವ ವಿಶ್ವ ಬಂಟರ ಸಮ್ಮಿಲನ-2018 ದ್ವಿತೀಯ ಕಾರ್ಯ ಕ್ರಮದ ಪೂರ್ವಭಾವಿ ಸಭೆಯು  ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ  ಸಭಾಭವನದಲ್ಲಿ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

 ಸಂಸ್ಥೆಯ ಗೌರವ ಕಾರ್ಯದರ್ಶಿ ವಿಜಯ ಪ್ರಸಾದ್‌ ಆಳ್ವ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಗಣ್ಯರು ಸಮ್ಮಿಲನ ಕಾರ್ಯಕ್ರಮದ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಮ್ಮಿಲನ ಸಂಭ್ರಮದಂದು ವಿವಿಧ ಬಂಟರ ಸಂಘಗಳ ವತಿಯಿಂದ ಸಾಂಸ್ಕೃತಿಕ ಸ್ಪರ್ಧೆ ಮತ್ತು ಸಂವಾದ ಕಾರ್ಯಕ್ರಮ, ಹಿರಿಯ ಗಣ್ಯರು, ದಾನಿಗಳು, ಅನಿವಾಸಿ ಉದ್ಯಮಿಗಳು, ಪ್ರತಿಭಾವಂತ ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಲಾಗುವುದು.

ಸಮಾರಂಭದ ಕೊನೆಯಲ್ಲಿ ಪಟ್ಲ ಸತೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ವೈಭವ ಜರಗಲಿದೆ. ಈ ಸಮಾರಂಭದಲ್ಲಿ 10 ಸಾವಿರಕ್ಕೂ ಮಿಕ್ಕಿದ ಬಂಟ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಚಲನಚಿತ್ರ ನಟ, ನಟಿಯರು, ಹಿರಿಯ ಸಮಾಜ ಬಾಂಧವರು, ಗಣ್ಯರು, ರಾಜಕೀಯ ನೇತಾರರು, ಅಲ್ಲದೆ ವಿದೇಶದಲ್ಲಿರುವ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಲೀಲಾಧರ ಶೆಟ್ಟಿ ಕಾಪು, ಮುಂಬಯಿ ಬಂಟರ ಸಂಘದ ಟ್ರಸ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ತೋನ್ಸೆ, ಮೋಹನ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಕೆ. ಚಂದ್ರಶೇಖರ ರೈ, ಅನಿಲ್‌ ಶೆಟ್ಟಿ ಹಾವಂಜೆ, ಸತೀಶ್‌ ಶೆಟ್ಟಿ ಹಾವಂಜೆ, ಪುಷ್ಪರಾಜ್‌ ಶೆಟ್ಟಿ ಕೊಡವೂರು, ಅಜಿತ್‌ ಶೆಟ್ಟಿ ಹಾವಂಜೆ, ಅಶ್ವಿ‌ತ್‌ ಶೆಟ್ಟಿ ಕೊಡವೂರು, ಸುರೇಶ್‌ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲು  ಮತ್ತಿತರರು  ಉಪಸ್ಥಿತರಿದ್ದರು. ಇಂದ್ರಾಳಿ ಜಯಕರ ಶೆಟ್ಟಿ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next