Advertisement

ಶಾಸಕರಿಂದ ಕಾಮಗಾರಿ ವೀಕ್ಷಣೆ

01:36 PM Oct 29, 2019 | Suhan S |

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರಲ್ಲಿ ವಿಜಯಪುರ ಮುಖ್ಯ ಕಾಲುವೆ ಕೂಡಗಿ ಬಳಿ ಶಾಸಕ ಶಿವಾನಂದ ಪಾಟೀಲ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

Advertisement

ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಚೇಂಬರ್‌ ನಿಂದ 500 ಮೀ. ಅಂತರದಲ್ಲಿರುವ ಕೂಡಗಿ ಬಳಿ ರೈಲ್ವೆ ಹಳಿ ದಾಟಿಸುವ ಕಾಮಗಾರಿ ಮಂದಗತಿಯಲ್ಲಿ ಈಗ ಸ್ಥಗಿತಗೊಂಡಿತ್ತು. ನೀರು ನಿಲುಗಡೆಯಾಗಿದ್ದನ್ನು ಗಮನಿಸಿದ ಶಾಸಕರು, ಈಗ ಮಳೆಯಾಗಿದೆ. ಹೇಗೊ ಕೆಲ ದಿನಗಳು ನಡೆಯುತ್ತದೆ, ಇನ್ನುಳಿದಂತೆ ಬೇಸಿಗೆಯಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಪರದಾಡುವಂತಾಗುತ್ತದೆ ಎಂಬುದನ್ನು ತಿಳಿದುಕೊಂಡರು.

ನಂತರ ಕೃಷ್ಣಾ ಭಾಗ್ಯಜಲ ನಿಗಮದ ಆಲಮಟ್ಟಿ ವಲಯ ಮುಖ್ಯ ಅಭಿಯಂತರ ಆರ್‌.ಪಿ. ಕುಲಕರ್ಣಿ ಅವರಿಗೆ ದೂರವಾಣಿ ಕರೆ ಮಾಹಿತಿ ಪಡೆದ ಶಿವಾನಂದ ಪಾಟೀಲ, ಈಗ ರೈಲ್ವೆ ಇಲಾಖೆಯಿಂದ ಕಾಮಗಾರಿ ವಿಳಂಬವಾಗಿದೆ ಎನ್ನುವುದು ಸರಿಯಷ್ಟೇ. ಆದರೆ ಬೇಸಿಗೆಯಲ್ಲಿ ಜನರಿಗೆ ತೊಂದರೆಯಾಗಲಿದ್ದು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿ ಸಿ ಕಾಮಗಾರಿ ಬೇಗನೆ ಮುಗಿಸಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next