Advertisement

ನಿರುದ್ಯೋಗ ನಿವಾರಣೆಗೆ ಉದ್ಯೋಗಮೇಳ ಸಹಕಾರಿ

11:42 AM Jul 26, 2017 | |

ವಿಜಯಪುರ: ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯುವ ಸಮೂಹಕ್ಕೆ ಉದ್ಯೋಗಮೇಳ ಕಾರ್ಯಕ್ರಮ ಹಮ್ಮಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಹೇಳಿದರು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಕೌಶಲ್ಯ ತರಬೇತಿ ಪಡೆದವರಿಗೆ ಉದ್ಯೋಗ ನೀಡುವ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿ ಹಾಗೂ ಸ್ವಂತ ಉದ್ಯೋಗ ಕ್ಷೇತ್ರದಲ್ಲಿ ಪ್ರತಿಭಾವಂತರಿಗೆ ಉದ್ಯೋಗದ ಸಾಕಷ್ಟು ಅವಕಾಶಗಳಿವೆ. ಇಂಥ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು
ಎಂದು ಸಲಹೆ ನೀಡಿಡಿದರು. ಆದರೆ ತಮ್ಮ ಇಚ್ಛಾಶಕ್ತಿ ಹಾಗೂ ಪ್ರಮಾಣಿಕ ಪ್ರಯತ್ನ ಹೊಂದಬೇಕು. ಇಂತಹ ಉದ್ಯೋಗ ಬೇಕೆನ್ನುವ ಮನೋಭಾವ ಬಿಟ್ಟು ಅವಕಾಶ ಸಿಕ್ಕ ಕಡೆ ಹೋಗಿ ನಿಮ್ಮ ಪ್ರತಿಭೆ ಹಾಗೂ ಕೆಲಸ ಮಾಡುವ ಸಾಮರ್ಥ್ಯ ತೋರಿಸಿ. ಕೆಲಸದಲ್ಲಿ ಭೇದಭಾವ ಬೇಡ. ಮಾಡುವಂತ ಕೆಲಸ ಗೌರವಿಸಿ ಅನುಭವದೊಂದಿಗೆ ಪ್ರಗತಿ ಸಾಧಿಸಬೇಕು ಎಂದರು. ಜಾವೀದ್‌ ಜಮಾದಾರ ಮಾತನಾಡಿದರು. 

ಐಎಎಸ್‌ ಅಧಿಕಾರಿ ಮಹ್ಮದ್‌ ಇಕ್ರಾವುಲ್ಲಾ ಶರೀಫ ಇದ್ದರು. ಉದ್ಯೋಗ ಮೇಳದಲ್ಲಿ ವಿಜಯಪುರದ 7, ಬೆಂಗಳೂರದ 10 ಕಂಪನಿಗಳ 140 ಯುವಕರಿಗೆ ಅವರ ಅರ್ಹತೆ ಆಧಾರದ ಮೇಲೆ ಉದ್ಯೋಗ ಆದೇಶ ಪ್ರತಿ ನೀಡಿದರು. ಅರುಣ ರೆಡ್ಡಿ ಸ್ವಾಗತಿಸಿದರು. ಎಸ್‌.ಜಿ.ಲೋಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next